ಕಕ್ಕೇರಾ: ಪಟ್ಟಣದಲ್ಲಿ ಭಾರೀ ಮಳೆಯಾಗಿದ್ದರಿಂದ ಮನೆ, ಅಂಗಡಿಗಳಿಗೆ ನುಗ್ಗಿ ಜನಜೀವನ ಅಸ್ತವ್ಯವಸ್ತೆವಾಗಿದೆ. ಭಾನುವಾರ ಸಂಜೆ ಸುರಿದ ಭಾರೀ ಮಳೆಯಾಗಿದ್ದರಿಂದ ಸೋಡಾ ಅಂಗಡಿ, ರಾಯಲ್ ಹೋಟೇಲ್, ಅಗಸಿ ಮುಂದಿನ ವಡ್ಡರ, ಹಾಗೂ ಮನೆ ಹಾಗೂ ಅಂಗಡಿಗಳಿಗೆ, ಪತ್ತಾರ್ ಜ್ಯೂವೆಲರ್ಸ್, ಫೈಸಾನ್ಸ್ ಮತ್ತು ತಂಬಿರಡ್ಡಿ ಹೋಟೆಲ್ಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿಗಳು ತುಂಬಿದ್ದರಿಂದ ತಗ್ಗು ಪ್ರದೇಶದ ಮನೆಗಳಲ್ಲಿ ನುಗ್ಗಿದೆ.
ಚರಂಡಿಗಳು ಸರಾಗವಾಗಿ ನೀರು ಹರಿವಯುವಂತೆ ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣಗೊಳಿಸಿಲ್ಲ. ಇದರಿಂದ ಪ್ರತಿಮಳೆಗಾಲದಲ್ಲಿ ಚರಂಡಿಗಳು ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಕಷ್ಟಕ್ಕೆ ಈಡಾಗುತ್ತಿದೆ. ಆದರೂ ಪುರಸಭೆ ಚರಂಡಿ ಸುವ್ಯವಸ್ಥೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಮುಪ್ಪಯ್ಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.