ಸುರಪುರ: ತಾಲ್ಲೂಕಿನ ಜುಮಾಲಪುರ ತಾಂಡಾದ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ರಾಜುಗೌಡ ಅವರ ಸಮ್ಮುಖದಲ್ಲಿ ಮಂಗಳವಾರ ಬಿಜೆಪಿ ಸೇರ್ಪಡೆಯಾದರು.
ಪಕ್ಷಕ್ಕೆ ಬರಮಾಡಿಕೊಂಡ ರಾಜುಗೌಡ ಮಾತನಾಡಿ, ‘ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು. ಮತ್ತು ಈ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
‘ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಾಲ್ಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳೇ ಶ್ರೀರಕ್ಷೆ ಆಗಿದ್ದು, ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು’ ಎಂದರು.
ಗೋವಿಂದಪ್ಪ ಸಾಹುಕಾರ, ವಸರಾಮ ಸಾಹುಕಾರ, ಹೊನ್ನಪ್ಪ ತೋಟದ, ರಾಜು ಪೂಜಾರಿ, ಬಾಬು ಪೂಜಾರಿ, ಗೋಪಿಲಾಲ ರಾಠೋಡ, ಶೇಖರ ಸಾಹುಕಾರ, ಶಂಕರ ರಾಠೋಡ, ಶಿವಪ್ಪ ರಾಠೋಡ, ಗೋವಿಂದಪ್ಪ ಮಡ್ಡಿ, ತಿರುಪತಿ ರಾಠೋಡ, ದೇವದಾಸ ಚವ್ಹಾಣ ಸೇರಿದಂತೆ 50ಕ್ಕೂ ಹೆಚ್ಚು ಜನ ಬಿಜೆಪಿಗೆ ಸೇರ್ಪಡೆಗೊಂಡರು.
ಮುಖಂಡರಾದ ವೆಂಕಟೇಶ ಸಾಹುಕಾರ, ಶಾಂತಿಲಾಲ ರಾಠೋಡ, ಸಂಗನಗೌಡ ವಜ್ಜಲ, ಎಚ್.ಸಿ.ಪಾಟೀಲ, ಮೋತಿಲಾಲ ಚವ್ಹಾಣ, ಬಸಣ್ಣ ಸಾಹುಕಾರ ಬೈಲಕುಂಟಿ, ಗದ್ದೆಪ್ಪ ಪೂಜಾರಿ, ಅಮರೇಶ ಸಾಹುಕಾರ ಗೆದ್ದಲಮರಿ, ಟಾಕಪ್ಪ ಕಾರಬಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.