ಗುರುಮಠಕಲ್: ‘ನ.10ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಬೇಕು’ ಎಂದು ಪಿಎಸ್ಐ ವೈ.ಎನ್.ಗುಂಡೂರಾವ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈಚೆಗೆ ಟಿಪ್ಪು ಜಯಂತಿ ನಿಮಿತ್ತ ನಡೆದ ಶಾಂತಿಸಭೆಯಲ್ಲಿ ಮಾತನಾಡಿದರು.
‘ಗುರುಮಠಕಲ್ ಠಾಣಾ ವ್ಯಾಪ್ತಿಯು ಶಾಂತಿ, ಸೌಹಾರ್ದಕ್ಕೆ ಹೆಸರಾಗಿದ್ದು, ಇಲ್ಲಿಯವರೆಗೆ ಯಾವುದೇ ಕೋಮುಗಲಭೆ ನಡೆದಿಲ್ಲ. ಮೇಲಧಿಕಾರಿಗಳ ಆದೇಶದಂತೆ ಶಿಷ್ಟಾಚಾರಕ್ಕೆ ಸಭೆ ಮಾಡಲಾಗಿದೆ. ಮುಂದೆಯೂ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗಬೇಕು’ ಎಂದು ಮನವಿ ಮಾಡಿದರು.
‘ಅಂದು ಎಲ್ಲಾ ಸರ್ಕಾರಿ ಕಾರ್ಯಾಲಯ, ಶಾಲಾ-ಕಾಲೇಜುಗಳಲ್ಲಿ ಜಯಂತಿ ಆಚರಿಸಲಾಗುತ್ತದೆ. ಜಯಂತಿಯ ಅಂಗವಾಗಿ ಯಾವುದೇ ಮೆರವಣಿಗೆ, ಬೃಹತ್ ಕಾರ್ಯಕ್ರಮ ನಡೆಸಬಾರದು’ ಎಂದು ತಿಳಿಸಿದರು. ಹೆಚ್ಚುವರಿ ಪಿಎಸ್ಐ ಬಸವರಾಜ, ಸೈಯದ್ ಅಕ್ಬರ್, ರಾಜ ರಮೇಶ, ಫಯಾಜ ಅಹ್ಮದ್, ಜಿ.ತಮ್ಮಣ್ಣ, ಮೊಯಿನೂದ್ದಿನ್, ಲಿಂಗಪ್ಪ ತಾಂಡೂರ್ ಕರ್, ಬಾಬು ತಲಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.