1) ವಿಶ್ವದಲ್ಲಿ ‘ಬೈಕಾಲ್’ ಆಳವಾದ ಸಿಹಿ ನೀರಿನ ಸರೋವರ ಎಂದು ಖ್ಯಾತಿಯಾಗಿದೆ. ಇದು ಈ ಕೆಳಕಂಡ ಯಾವ ದೇಶದಲ್ಲಿ ಹರಿಯುತ್ತದೆ? a) ರಷ್ಯಾ
b) ಜರ್ಮನಿ
c) ಅಮೆರಿಕ
d) ದಕ್ಷಿಣ ಆಫ್ರಿಕಾ
**
2) ಅತಿ ಹೆಚ್ಚು ದ್ವೀಪಗಳನ್ನು ಹೊಂದಿರುವುದರಿಂದ ಈ ದೇಶವನ್ನು ‘ ಅತಿದೊಡ್ಡ ದ್ವೀಪಸಮೂಹ ದೇಶ’ ಎಂದು ಕರೆಯುತ್ತಾರೆ. ಆ ದೇಶ ಯಾವುದು?
a) ಜಪಾನ್
b) ಇಂಡೋನೇಷ್ಯಾ
c) ಶ್ರೀಲಂಕಾ
d) ಭಾರತ (ಲಕ್ಷದ್ವೀಪ)
**
3) ನ್ಯಾಯಕ್ಕೆ ಸಂಬಂಧಿಸಿದಂತೆ ಬ್ಯಾಬಿಲೋನಿಯನ್ನರ ದೊರೆ ಹಮ್ಮುರಬಿ ರೂಪಿಸಿದ ಕಾಯ್ದೆಗಳನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?
a) ಹಮ್ಮುರಬಿ ಶಾಸನ
b) ಹಮ್ಮುರಬಿ ಕಿತಾಬ್
c) ಹಮ್ಮುರಬಿ ಕೋಡ್
d) ಹಮ್ಮುರಬಿ ನ್ಯಾಯ
**
4) ಕ್ರಿ.ಶ. 1230ರಲ್ಲಿ ದೆಹಲಿ ಸಿಂಹಾಸನವನ್ನೇರಿದ ಮೊದಲ ಹಾಗೂ ಏಕೈಕ ಮುಸ್ಲಿಂ ರಾಣಿ ಯಾರು?
a) ಮುಮ್ತಾಜ್ ಬೇಗಂ
b) ಪಾತಿಮಾ ಬೀಬಿ
c) ಅಲ್ತೂನಿ ಸುಲ್ತಾನ
d) ರಜಿಯಾ ಸುಲ್ತಾನ
**
5) ಭಾರತದ ರಾಷ್ಟ್ರಲಾಂಛನದಲ್ಲಿ ಈ ಕೆಳಕಂಡ ಯಾವ ಪ್ರಾಣಿ ಕಾಣಸಿಗುವುದಿಲ್ಲ?
a) ಚಿರತೆ
b) ಎತ್ತು
c) ಕುದುರೆ
d) ಸಿಂಹ
**
6) ಸಾಹಿತಿ ಬೊಳುವಾರು ಮಹಮ್ಮದ್ ಕುಂಙ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕಾರ ಬಂದಿದೆ.?
a) ಓದಿರಿ
b) ಸ್ವಾತಂತ್ರ್ಯದ ಓಟ
c) ಆಕಾಶದೀಪ
d) ಅನಾಥ
**
7) ಭಾರತದಲ್ಲಿ ರೇಷ್ಮೆ ವಹಿವಾಟಿನ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಈ ಕೆಳಕಂಡ ಯಾವ ನಗರದಲ್ಲಿ ಇದೆ?
a) ವಿಜಯವಾಡ
b) ಕಾಂಜೀವರಂ
c) ರಾಮನಗರ
d) ಗುವಾಹಟಿ
**
8) ರಾಜ್ಯದಲ್ಲಿ ನೆಲೆಸಿರುವ ಬುಡಕಟ್ಟು ಸೋಲಿಗ ಜನಾಂಗದವರ ಕುಲದೈವ ಯಾವುದು?
a) ಮಹದೇಶ್ವರ
b) ಮಂಟೇಸ್ವಾಮಿ
c) ಸಿದ್ಧಪಾಜಿ
d) ಬಿಳಿಗಿರಿ ರಂಗನಾಥಸ್ವಾಮಿ
**
9)ರಾಜ್ಯಸಭೆಯು ಸಂಸತ್ತಿನ ಮೇಲ್ಮನೆಯಾದರೆ, ಸಂಸತ್ತಿನ ಕೆಳಮನೆ ಯಾವುದು?
a) ಲೋಕಸಭೆ
b) ವಿಧಾನಸಭೆ
c) ಪರಿಷತ್ ಸಭೆ
d) ಯಾವುದು ಇಲ್ಲ
**
10) ಹಸಿರು ಕ್ರಾಂತಿ ಮೊದಲು ಈ ಕೆಳಕಂಡ ಯಾವ ರಾಜ್ಯಗಳಲ್ಲಿ ಉಂಟಾಯಿತು?
a) ಪಂಜಾಬ್-ಹರಿಯಾಣ
b) ಉತ್ತರ ಪ್ರದೇಶ-ದೆಹಲಿ
c) ತಮಿಳುನಾಡು-ಕರ್ನಾಟಕ
d) ರಾಜಸ್ತಾನ-ಗುಜರಾತ್
*
ಉತ್ತರಗಳು 1-a, 2-b, 3-c, 4-d, 5-a, 6-b, 7-c, 8-d, 9-a, 10-a.