ADVERTISEMENT

ಅನುಷ್ಕಾ ಶೆಟ್ಟಿ ಒಲಿಯುವರೇ ತೆಲುಗಿನ ‘ರುದ್ರಾಕ್ಷ’ಕ್ಕೆ?

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2015, 19:51 IST
Last Updated 28 ಡಿಸೆಂಬರ್ 2015, 19:51 IST

ತೆಲುಗಿನ ಕೃಷ್ಣ ವಂಶಿ ನಿರ್ಮಿಸುತ್ತಿರುವ ಮೆಗಾ ಬಜೆಟ್‌ ಚಿತ್ರ ‘ರುದ್ರಾಕ್ಷ’ದಲ್ಲಿ ನಟಿಸುವಂತೆ ನಟಿ ಅನುಷ್ಕಾ ಶೆಟ್ಟಿಗೆ ಆಹ್ವಾನ ನೀಡಿದ್ದಾರೆ. ಆದರೆ ಅನುಷ್ಕಾ ಈವರೆಗೆ ಸಹಿ ಹಾಕಿಲ್ಲ ಎಂದು ಮೂಲಗಳು ತಿಳಿಸಿವೆ.

ಅನುಷ್ಕಾಗೆ ಚಿತ್ರದ ಕಥೆ ತುಂಬಾ ಇಷ್ಟವಾಗಿದ್ದು, ಸದ್ಯ ‘ಬಾಹುಬಲಿ 2’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಡೇಟ್‌ ಹೊಂದಾಣಿಕೆಯ ಸಮಸ್ಯೆಯಾಗಿತ್ತು. ಇದರಿಂದಾಗಿ ಅನುಷ್ಕಾ ಈವರೆಗೆ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ.

ಅಲ್ಲದೆ ‘ಬಾಹುಬಲಿ 2’ ಚಿತ್ರದ  ಚಿತ್ರೀಕರಣ ಯಾವಾಗ ಮುಗಿಯುತ್ತದೆ ಎಂದು ಸರಿಯಾಗಿ ತಿಳಿಯದ ಕಾರಣ ಅನುಷ್ಕಾ ಈವರೆಗೆ ಹೊಸ ಚಿತ್ರಗಳಿಗೆ ಸಹಿ ಹಾಕಿಲ್ಲ. 

ಐವರು ನಾಯಕರು ಮತ್ತು ಇಬ್ಬರು ನಾಯಕಿಯರು ನಟಿಸುತ್ತಿರುವ ‘ರುದ್ರಾಕ್ಷ’ ಚಿತ್ರಕ್ಕೆ ಮುಖ್ಯ ನಾಯಕಿಯ ಪಾತ್ರಕ್ಕಾಗಿ ಹೊಸ ಮುಖದ ಹುಡುಕಾಟದಲ್ಲಿ ತೊಡಗಿರುವ ನಿರ್ದೇಶಕರು ಸದ್ಯದಲ್ಲೇ ಈ ಚಿತ್ರದ ನಾಯಕಿ ಯಾರು ಎಂಬುದನ್ನು ಅಂತಿಮಗೊಳಿಸಲಿದ್ದಾರೆ. ನಿರ್ದೇಶಕರ ವೃತ್ತಿ ಜೀವನದ ಅತಿ ದೊಡ್ಡ ಬಜೆಟ್‌ನ ಚಿತ್ರ ಇದಾಗಲಿದೆ ಎಂಬ ಗುಸುಗುಸು ಕೂಡ ಟಾಲಿವುಡ್‌ನಲ್ಲಿ ಕೇಳಿಬರುತ್ತಿದೆ. 
        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT