ADVERTISEMENT

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST

ಲೀ
ಸಾರಥಿ ಸತೀಶ, ದರ್ಶನ್ ಕೃಷ್ಣ  ಹಾಗೂ ಎಸ್.ಬಿ. ವಿನಯ್ ನಿರ್ಮಿಸಿರುವ ಚಿತ್ರ ‘ಲೀ’. ಎಚ್.ಎಂ. ಶ್ರೀನಂದನ ಕಥೆ, ಚಿತ್ರಕಥೆ ರಚಿಸಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.ಚಿತ್ರಕ್ಕೆ ಗುರುಕಿರಣ್ ಮತ್ತು  ಆನಂದರಾಜ ವಿಕ್ರಮ್ ಸಂಗೀತ ಸಂಗೀತ ನಿರ್ದೇಶನ, ಎಂ.ಯು. ನಂದಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.  ಸುಮಂತ್ ಶೈಲೇಂದ್ರ, ನಭಾ ನಟೇಶ್, ಸ್ನೇಹ, ನಮನಂದಿ, ರಂಗಾಯಣ ರಘು, ಮುಂತಾದವರು ತಾರಾಗಣದಲ್ಲಿದ್ದಾರೆ.

***
‘ಮನಸು ಮಲ್ಲಿಗೆ’ಗೆ ಮಾತಿನ ಜೋಡಣೆ

ರಾಕ್‌ಲೈನ್ ವೆಂಕಟೇಶ್ ಹಾಗೂ ಆಕಾಶ್ ಚಾವ್ಲಾ ನಿರ್ಮಾಣದಲ್ಲಿ, ಎಸ್. ನಾರಾಯಣ್ ನಿರ್ದೇಶಿಸಿರುವ ‘ಮನಸು ಮಲ್ಲಿಗೆ’ ಚಿತ್ರದ ಮಾತಿನ ಜೋಡಣೆ, ಇತ್ತೀಚೆಗೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮುಕ್ತಾಯವಾಗಿದೆ.  ಮರಾಠಿ ಭಾಷೆಯ ‘ಸೈರಾಟ್’ ಚಿತ್ರದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ನಿಶಾಂತ್ ಹಾಗೂ ರಿಂಕು ರಾಜಗುರು ಅಭಿನಯಿಸಿದ್ದು, ಫೆಬ್ರುವರಿಯಲ್ಲಿ ಚಿತ್ರ ತೆರೆಗೆ ಬರಲಿದೆ.

***
ಅಂತಿಮ ಹಂತದಲ್ಲಿ ‘ಉಪೇಂದ್ರ ಮತ್ತೆ ಬಾ’

ಅರುಣ್ ಲೋಕನಾಥ್ ನಿರ್ದೇಶನದ ‘ಉಪೇಂದ್ರ ಮತ್ತೆ ಬಾ’ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಚಿತ್ರಕ್ಕೆ ಸ್ವತಃ ಉಪೇಂದ್ರ ಸಂಭಾಷಣೆ ಬರೆದಿದ್ದಾರೆ. ಚಿತ್ರದ ತಾರಾಗಣದಲ್ಲಿ ಪ್ರೇಮಾ,  ಶ್ರುತಿ ಹರಿಹರನ್, ಚಾಂದಿನಿ, ಹರ್ಷಿಕಾ ಪೂಣ್ಣಚ್ಚ, ಸಾಯಿಕುಮಾರ್ ಮುಂತಾದವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.