ಬೆಂಗಳೂರು: ಮಠ ಗುರುಪ್ರಸಾದ್ ನಿರ್ದೇಶನದ ‘ಎರಡನೇಸಲ..!’ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ.
ಹಸಿ ಬಿಸಿ ‘ಕಾಫಿ’ ಡೈಲಾಗ್ಗಳಿಂದ ಚಿತ್ರದ ಮೊದಲ ಟ್ರೇಲರ್ ಸುದ್ದಿಯಾಗಿತ್ತು. ಬಿಡುಗಡೆಯಾಗಿರುವ ಎರಡನೇ ಟ್ರೇಲರ್ ಅದರ ಮುಂದುವರಿದ ಭಾಗದಂತಿದೆ.
ಭಿನ್ನಾರ್ಥ ಕೊಡುವ ಸಂಭಾಷೆ ಜತೆಗೆ ‘ಯಾವ ಸರ್ಕಾರ ಬಂದರೆ ಏನು, ವಾರಕ್ಕೆ ಒಂದು ದಿನ ಅಮ್ಮನಿಗೆ ಅಂತ ರಜೆ ಅನೌನ್ಸ್ ಮಾಡ್ಲಿಲ್ವೆಲ್ಲ..’ ಎಂಬ ಗಮನ ಸೆಳೆಯುವ ಡೈಲಾಗ್ಗಳನ್ನೂ ಕೇಳಬಹುದು.
ಅನೂಪ್ ಸಿಳೀನ್ ಸಂಗೀತ ನಿರ್ದೇಶನವಿದ್ದು, ಅವರೇ ಹಾಡಿರುವ ‘ಪ್ರೇಮ ಕುರುಡೂ, ಪ್ರೇಮಿ ಕುರುಡು ಆಟವೇನೋ ಜೀವ ಎರಡೂ....’ ಹಾಡಿನ ಹಿನ್ನೆಲೆಯಲ್ಲಿ ಟ್ರೇಲರ್ ಮತ್ತೆ ಮತ್ತೆ ನೋಡಿಸಿಕೊಳ್ಳುತ್ತದೆ.
ಚಿತ್ರದಲ್ಲಿ ಧನಂಜಯ್, ಸಂಗೀತಾ ಭಟ್ ಹಾಗೂ ಲಕ್ಷ್ಮೀ ಮುಂತಾದವರ ಅಭಿನಯವಿದೆ. ನಿರ್ದೇಶಕ ಗುರುಪ್ರಸಾದ್ ಸಾಕಷ್ಟು ಸಮಯದ ನಂತರ ಭಿನ್ನ ಪ್ರೇಮಕಥೆಯನ್ನು ಹೇಳಲು ಹೊರಟಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.