ಚಿಂತನ್ ನಿರ್ದೇಶನದ ದರ್ಶನ್ ಹಾಗೂ ದೀಪಾ ಸನ್ನಿಧಿ ಅಭಿನಯದ ‘ಚಕ್ರವರ್ತಿ’ ಕನ್ನಡ ಸಿನೆಮಾ ಏಪ್ರಿಲ್ 14ಕ್ಕೆ ತೆರೆಗೆ ಬರಲು ಸಜ್ಜುಗೊಂಡಿದೆ. ಈಗಾಗಲೇ ಸೆನ್ಸಾರ್ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ.
ಈ ಚಿತ್ರದಲ್ಲಿ ದರ್ಶನ್ ಅವರನ್ನು ಮೂರು ವಿಭಿನ್ನ ಸಮಯ, ಮೇಕಪ್ಪ್ನಲ್ಲಿ ಕಾಣಬಹುದು.
ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಸಿನಿಮಾದ ಇನ್ನೊಂದು ವಿಶೇಷ. ಸಿದ್ದಾಂತ್, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ಆದಿತ್ಯ, ಯಶಸ್, ಶರತ್ ಲೋಹಿತಾಶ್ವ ತಾರಾಗಣದಲ್ಲಿ ಇದ್ದಾರೆ.
ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಸಿನಿಮಾಕ್ಕೆ ಕೆ. ಎಸ್. ಚಂದ್ರಶೇಖರ್ ಛಾಯಾಗ್ರಹಣ ಮಾಡಿದ್ದಾರೆ. ಕೆ ಎಂ ಪ್ರಕಾಶ್ ಅವರ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಅವರ ಗೀತ ಸಾಹಿತ್ಯ, ಫಳಣಿ ರಾಜ್ ಅವರ ಸಾಹಸ ‘ಚಕ್ರವರ್ತಿ’ಗಿದೆ.