ADVERTISEMENT

ಶ್ರೀನಿವಾಸ್‌ಗೆ ಖುಲಾಯಿಸಿದ ಅದೃಷ್ಟ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2014, 19:30 IST
Last Updated 19 ಆಗಸ್ಟ್ 2014, 19:30 IST
ಶ್ರೀನಿವಾಸ್‌ಗೆ ಖುಲಾಯಿಸಿದ ಅದೃಷ್ಟ
ಶ್ರೀನಿವಾಸ್‌ಗೆ ಖುಲಾಯಿಸಿದ ಅದೃಷ್ಟ   

ಬೆಲ್ಲಮ್‌ಕೊಂಡ ಶ್ರೀನಿವಾಸ್ ಅಭಿನಯದ ಚೊಚ್ಚಲ ಚಿತ್ರ ‘ಅಲ್ಲುಡು ಸೀನು’ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದು, ₨ 30 ಕೋಟಿಗೂ ಹೆಚ್ಚು ಹಣ ಮಾಡಿದೆ. 

‘ನನ್ನ ಮಗ ಶ್ರೀನಿವಾಸ್ ಅನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಲು ನಾನು ಆಯ್ಕೆ ಮಾಡಿದ ಚಿತ್ರ ನಿಜಕ್ಕೂ ಖುಷಿ ನೀಡಿದೆ' ಎಂದಿರುವ ನಿರ್ಮಾಪಕ ಬೆಲ್ಲಮ್‌ಕೊಂಡ ಸುರೇಶ್‌, 'ಈ ಚಿತ್ರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂದು ಊಹೆಯನ್ನೂ ಮಾಡಿರಲಿಲ್ಲ ಎಂದಿದ್ದಾರೆ’.

‘ನನ್ನ ಮಗ ಅಭಿನಯಿಸಿರುವ ಚಿತ್ರದ ಯಶಸ್ಸಿನಿಂದ ತುಂಬಾ ಸಂತೋಷವಾಗಿದೆ. ತಂದೆಯಾಗಿ ಮಗನಿಗೆ ನನ್ನ ಕೈಲಾದಷ್ಟು ಮಾಡಬೇಕೆಂದು ಉತ್ತಮ ಚಿತ್ರಕ್ಕಾಗಿ ಕಾಯುತ್ತಿದ್ದೆ. ಅದಕ್ಕಾಗಿ ಒಳ್ಳೆಯ ನಿರ್ದೇಶಕನಿಗಾಗಿ ಹುಡುಕಾಟ ನಡೆಸಿದ್ದೆ. ಆದರೆ ಈ ಚಿತ್ರದ ಯಶಸ್ಸನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ’ ಎಂದು ಐಎಎನ್‌ಎಸ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಅಲ್ಲುಡು ಸೀನು ಚಿತ್ರ ಕಡಿಮೆ ಬಜೆಟ್‌ ಚಿತ್ರವಲ್ಲ. ಚಿತ್ರದ ನಿರ್ಮಾಣಕ್ಕಾಗಿ ₨ 20 ಕೋಟಿ ಖರ್ಚು ಮಾಡಲಾಗಿದ್ದು, ಚಿತ್ರದಿಂದ ಈಗಾಗಲೇ ₨ 30 ಕೋಟಿ ಗಳಿಸಿದ್ದೇನೆ. ಇದರಿಂದ ನನ್ನ ಮಗನಿಗೆ ಒಳ್ಳೆಯ ಮಾರ್ಕೆಟ್ ಇದೆ ಹಾಗೂ ಮಗ ಶ್ರೀನಿವಾಸ್ ಅಭಿನಯದ ಚಿತ್ರಗಳು ಪ್ರೇಕ್ಷಕರನ್ನು ಸಿನಿಮಾ ಮಂದಿರಗಳಿಗೆ ಕರೆ ತರುತ್ತವೆ ಎಂದು ಸಾಬೀತಾಗಿದೆ’ ಎನ್ನುತ್ತಾರೆ ನಿರ್ಮಾಪಕ ಸುರೇಶ್‌.  

ಅಲ್ಲುಡು ಸೀನು ಚಿತ್ರವನ್ನು ನಿರ್ದೇಶಕ ವಿ.ವಿ. ವಿನಾಯಕ್‌ ನಿರ್ದೇಶಿಸಿದ್ದಾರೆ. ನಟ ಶ್ರೀನಿವಾಸ್ ಅವರ ಮುಂಬರುವ ಚಿತ್ರವನ್ನು ನಿರ್ದೇಶಕ ಬೋಯಪತಿ ಶ್ರೀನು ನಿರ್ದೇಶಿಸಲಿದ್ದು, ಈ ತಿಂಗಳ ಕೊನೆಯಲ್ಲಿ ಈ ಚಿತ್ರ ಸೆಟ್ಟೇರಲಿದೆ ಎಂದಿದ್ದಾರೆ ಸುರೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT