ADVERTISEMENT

‘ಒಪ್ಪಿಕೊಂಡ ಕೆಲಸ ಮುಗಿಸಬೇಕು’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST

ರೌಡಿ ರಾಥೋರ್, ರಾ...ರಾಜ್‌ಕುಮಾರ್‌ ಸಿನಿಮಾದ ನಂತರ ಬಾಲಿವುಡ್‌ನಲ್ಲೇ  ತಾವು ಹೆಚ್ಚು ಬ್ಯುಸಿಯಾಗಿರುವುದಾಗಿ ಜನ ಅಭಿಪ್ರಾಯ ಪಡುತ್ತಿರುವುದನ್ನು ನಟ, ನಿರ್ದೇಶಕ, ನೃತ್ಯ ನಿರ್ದೇಶಕ ಪ್ರಭುದೇವ ಅಲ್ಲಗಳೆದಿದ್ದಾರೆ.

‘ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವುದರಿಂದ ನಾನು ತಮಿಳು ಇಂಡಸ್ಟ್ರಿಯನ್ನು ನಿರ್ಲಕ್ಷಿಸುತ್ತಿದ್ದೇನೆ ಎಂದರ್ಥವಲ್ಲ. ಬಾಲಿವುಡ್‌ನಲ್ಲಿ ಒಪ್ಪಿಕೊಂಡ ಒಂದಷ್ಟು ಕೆಲಸವನ್ನು ಮುಗಿಸಬೇಕಿದೆ. ಅದು ಮುಗಿದ ನಂತರ ನಾನು ಮತ್ತೆ ತಮಿಳು ಸಿನಿಮಾಗಳನ್ನು ಮಾಡುತ್ತೇನೆ’ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಸದ್ಯಕ್ಕೆ ಅಜಯ್‌ ದೇವಗನ್‌ ಅಭಿನಯಿಸುತ್ತಿರುವ ‘ಆ್ಯಕ್ಷನ್ ಜಾಕ್ಸನ್’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭುದೇವ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.