ADVERTISEMENT

ಇಂದು ವೀರಭದ್ರಸ್ವಾಮಿ ಜಾತ್ರೆ

ಚಿಕ್ಕ ರಾಮು
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST
ಇಂದು ವೀರಭದ್ರಸ್ವಾಮಿ ಜಾತ್ರೆ
ಇಂದು ವೀರಭದ್ರಸ್ವಾಮಿ ಜಾತ್ರೆ   

ಶ್ರೀವೀರಭದ್ರಸ್ವಾಮಿ ದೇವರ ಜಾತ್ರಾ ಮಹೋತ್ಸವ ಏ.19ರಂದು ಮಾಗಡಿ ರಸ್ತೆ, ಯಶವಂತಪುರ ಹೋಬಳಿಯ ಕನ್ನಲ್ಲಿಯಲ್ಲಿ ನಡೆಯಲಿದೆ.

ಚೋಳರ ಆಳ್ವಿಕೆ ಕಾಲದ ಈ ದೇವಸ್ಥಾನದಲ್ಲಿ ಅಂದಿನಿಂದಲೂ ಇಂದಿನವರೆಗೂ ದೇವರ ಉತ್ಸವ, ಅಗ್ನಿಕೊಂಡ, ರಥೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.

(ಏ.19) ಬುಧವಾರ ಬೆಳಿಗ್ಗೆ ನೂರಾರು ಮಹಿಳೆಯರು ಬೆಲ್ಲ, ತಂಬಿಟ್ಟು, ಹೂವಿನ ಆರತಿಯೊಂದಿಗೆ ಮೆರವಣಿಗೆಯಲ್ಲಿ ಬಂದು ಪೂಜೆ ಸಲ್ಲಿಸುವರು. ಬೆಳಿಗ್ಗೆ 7.30ಕ್ಕೆ ಅಗ್ನಿಕೊಂಡ ಹಾಯುವುದು, 11.30ಕ್ಕೆ ರಥೋತ್ಸವ, ಸಾಂಸ್ಕೃತಿಕ ಉತ್ಸವ, ಪ್ರಸಾದದ ವ್ಯವಸ್ಥೆ ಇರುತ್ತದೆ. ಸಂಜೆ 6ಕ್ಕೆ ಹಲವು ಜನಪದ ಕುಣಿತ, ನಂತರ ವೀರಭದ್ರಸ್ವಾಮಿ ಪಲ್ಲಕ್ಕಿ ಉತ್ಸವ ನೆರವೇರಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.