ADVERTISEMENT

ಮಲ್ಲೇಶ್ವರದಲ್ಲಿ ಹೋಮಿಯೊ ಕೇರ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST
ಶಾಸಕ ಸುರೇಶ್‌ ಕುಮಾರ್‌ ಅವರು ಇತ್ತೀಚಿಗೆ ಮಲ್ಲೇಶ್ವರದಲ್ಲಿ ‘ಹೋಮಿಯೊ ಕೇರ್‌’ ಶಾಖೆ ಉದ್ಘಾಟಿಸಿದರು. ಶಾಸಕ ಅಶ್ವತ್ಥನಾರಾಯಣ, ಹೋಮಿಯೊ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ್‌ ಬಿ. ಜೈನ್‌, ಡಾ. ಸುಧೀಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಾಸಕ ಸುರೇಶ್‌ ಕುಮಾರ್‌ ಅವರು ಇತ್ತೀಚಿಗೆ ಮಲ್ಲೇಶ್ವರದಲ್ಲಿ ‘ಹೋಮಿಯೊ ಕೇರ್‌’ ಶಾಖೆ ಉದ್ಘಾಟಿಸಿದರು. ಶಾಸಕ ಅಶ್ವತ್ಥನಾರಾಯಣ, ಹೋಮಿಯೊ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ್‌ ಬಿ. ಜೈನ್‌, ಡಾ. ಸುಧೀಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.   

ನಗರದ ಮಲ್ಲೇಶ್ವರದಲ್ಲಿ ಇತ್ತೀಚಿಗೆ ‘ಹೋಮಿಯೊ ಕೇರ್‌’ ಮಕ್ಕಳ ಹೋಮಿಯೊಪತಿ ಚಿಕಿತ್ಸಾಲಯದ ಉದ್ಘಾಟನೆ ನೆರವೇರಿತು.
ಶಾಸಕ ಸುರೇಶ್ ಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಚಿಕಿತ್ಸಾಲಯವನ್ನು ಉದ್ಘಾಟಿಸಿದರು.

ಸ್ಥಳೀಯ ಶಾಸಕ ಡಾ. ಅಶ್ವತ್ಥನಾರಾಯಣ, ಹೋಮಿಯೊಪತಿ ಚಿಕಿತ್ಸಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ್‌ ಬಿ. ಜೈನ್‌, ಡಾ. ಸುಧೀಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

‘ಮಕ್ಕಳ ವಿವಿಧ ರೀತಿಯ ನಡವಳಿಕೆಗೆ ಸಂಬಂಧಿಸಿದಂತೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಂದಿರಾ ನಗರದಲ್ಲಿ ಈಗಾಗಲೇ ನಮ್ಮ ಶಾಖೆ ಆರಂಭಗೊಂಡಿದ್ದು, ಮಲ್ಲೇಶ್ವರದಲ್ಲಿ ತೆಗೆದಿರುವ ಎರಡನೇ ಶಾಖೆ ಇದಾಗಿದೆ. ದೇಶದಲ್ಲಿ ಒಟ್ಟು ೧೨ ಶಾಖೆಗಳಿವೆ’ ಎಂದು ಚಿಕಿತ್ಸಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ್‌ ಬಿ. ಜೈನ್‌ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.