ADVERTISEMENT

ಸಂಗೀತ ಶಿಬಿರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 19:59 IST
Last Updated 6 ಆಗಸ್ಟ್ 2013, 19:59 IST

ಅರಕೆರೆಯ ನಾದಬ್ರಹ್ಮ ಪ್ರಾರ್ಥನಾ ಮಂದಿರ ಆಗಸ್ಟ್ 9, 10ರಂದು ಸಂಗೀತ ಶಿಬಿರವನ್ನು ಆಯೋಜಿಸಿದೆ. ದಾಸರಪದ ಹಾಗೂ ಭಾವಗೀತೆಗಳ ಈ ಶಿಬಿರವನ್ನು ಆಕಾಶವಾಣಿ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ.ಎನ್.ರಘು ನಡೆಸಿಕೊಡಲಿದ್ದಾರೆ.

 ಬೆಳಿಗ್ಗೆ 10ರಿಂದ ಸಂಜೆ 4ರವರೆಗೂ ಈ ಶಿಬಿರ ನಡೆಯಲಿದೆ. ಎಂಟು ವರ್ಷ ಮೇಲ್ಪಟ್ಟ ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸಬಹುದು. ಮಾಹಿತಿಗೆ: 98455 81130.


ಅಭಿನಯ ತರಬೇತಿ
`ರಂಗ ವಿಸ್ಮಯ' ನಾಟಕ ತಂಡವು ಪ್ರತಿ ಭಾನುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಮಲ್ಲೇಶ್ವರದಲ್ಲಿ ಅಭಿನಯದ ವಿವಿಧ ಆಯಾಮಗಳ ಕುರಿತು ತರಬೇತಿ ನೀಡಲಿದೆ.

ಈ ತರಬೇತಿಯಲ್ಲಿ ಅಭಿನಯ ಕಲೆ, ವರದಿ, ವಾರ್ತಾವಾಚನ, ಕಂಠದಾನ ಕಲೆ, ನಿರೂಪಣಾ ಕೌಶಲ ಕುರಿತು ಹೇಳಿಕೊಡಲಾಗುವುದು. ಹದಿನೈದು ವರ್ಷ ಮೇಲ್ಪಟ್ಟ ಆಸಕ್ತರು ಇದರಲ್ಲಿ ಭಾಗವಹಿಸಬಹುದು. ಮಾಹಿತಿಗೆ: 98808 41290.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.