ಬಾಲಿವುಡ್ ನಟ ಅಕ್ಷಯ್ಕುಮಾರ್ ಒಂದಿಲ್ಲೊಂದು ರೀತಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಈಗ ಯುದ್ಧದಲ್ಲಿ ಹೋರಾಡಿ ದೇಶಕ್ಕಾಗಿ ಮಡಿದ ಮಹಾರಾಷ್ಟ್ರದ ಕೊಲ್ಹಾಪುರದ 103 ಯೋಧರ ಕುಟುಂಬಕ್ಕೆ ತಲಾ ₹ 25 ಸಾವಿರ ದೀಪಾವಳಿ ಉಡುಗೊರೆ ನೀಡಿದ್ದಾರೆ. ಇದರ ಜೊತೆಗೇ ಸಿಹಿಯನ್ನೂ ಹಂಚಿದ್ದಾರೆ.
ಸಿಹಿಯ ಜೊತೆಗೆ ಇಟ್ಟಿದ್ದ ಪತ್ರದಲ್ಲಿದ್ದ ಆಪ್ತಬರಹ ಸ್ಟಾರ್ನಟನನ್ನು ಯೋಧರ ಕುಟುಂಬಗಳಿಗೆ ಇನ್ನಷ್ಟು ಹತ್ತಿರ ತಂದಿದೆ.
‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಿಮ್ಮ ಕುಟುಂಬ ಸದಸ್ಯರ ತ್ಯಾಗವನ್ನು ನಾನು ಮೆಚ್ಚುತ್ತೇನೆ. ಈ ದೀಪಾವಳಿ ಹಬ್ಬದ ಸಮಯದಲ್ಲಿ ಅವರನ್ನು ನೀವು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಿರಿ ಎಂಬುದು ನನಗೆ ಗೊತ್ತು. ಮಕ್ಕಳಿಗಾಗಿ ಕೆಲ ಪುಸ್ತಕ ಹಾಗೂ ಸಿಹಿತಿಂಡಿಗಳನ್ನು ಕಳುಹಿಸಿದ್ದೇನೆ. ಪ್ರೀತಿಯಿಂದ ಸ್ವೀಕರಿಸಿ’ ಎಂಬ ಒಕ್ಕಣೆ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.