ಬದಾಯೂಂ (ಉತ್ತರ ಪ್ರದೇಶ) (ಪಿಟಿಐ): ದಲಿತ ಸಹೋದರಿಯರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ತಂಡ ನಡೆಸಲಿರುವ ಸುಳ್ಳುಪತ್ತೆ ಪರೀಕ್ಷೆಗೆ ಹಾಜರು ಪಡಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ಜೂನ್ 24ರಿಂದ 26ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಲೋಕೋಪಯೋಗಿ ಅತಿಥಿಗೃಹದಲ್ಲಿ ಸುಳ್ಳುಪತ್ತೆ ಪರೀಕ್ಷೆ ನಡೆಸಲಿರುವ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡದ ಎದುರು ಎಲ್ಲ ಐವರು ಆರೋಪಿಗಳನ್ನು ಹಾಜರು ಪಡಿಸುವಂತೆ ಬದಾಯೂಂ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದೆ.
ಪಪ್ಪು ಯಾದವ್, ಆತನ ಸಹೋದರ ರಾದ ಆವದೇಶ್ ಮತ್ತು ಊರ್ವೇಶ್, ಕಾನ್ಸ್ಟೆಬಲ್ ಸರ್ವೇಶ್ ಯಾದವ್ ಮತ್ತು ಹೆಡ್ ಕಾನ್ಸ್ಟೆಬಲ್ ಛತ್ರಪಾಲ್ ಸುಳ್ಳುಪತ್ತೆ ಪರೀಕ್ಷೆಗೆ ನ್ಯಾಯಾಲಯ ಸಿಬಿಐಗೆ ಅನುಮತಿ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.