ADVERTISEMENT

ಅನಂತ್‌ ಗೀತೆ ರಾಜೀನಾಮೆಗೆ ಅಖಾಡ ಸಿದ್ಧ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 13:34 IST
Last Updated 29 ಸೆಪ್ಟೆಂಬರ್ 2014, 13:34 IST

ಮುಂಬೈ (ಪಿಟಿಐ): ಬಿಜೆಪಿ ಜತೆಗಿನ ಕಾಲು ಶತಮಾನದ ಮೈತ್ರಿ ಮುರಿದು ಬಿದ್ದ ಪರಿಣಾಮ ನರೇಂದ್ರ ಮೋದಿ ಅವರ ಸಂಪುಟದಲ್ಲಿರುವ ಶಿವಸೇನೆಯ ಏಕೈಕ ಸಂಸದ ಅನಂತ್ ಗೀತೆ ಅವರ ರಾಜೀನಾಮೆಗೆ ವೇದಿಕೆ ಸಿದ್ಧವಾಗಿದೆ.

‘ಪ್ರಧಾನಿ ಮೋದಿ ಅವರು ಅಮೆರಿಕದಿಂದ ಹಿಂದಿರುಗಿದ ಬಳಿಕ ಗೀತೆ ಅವರು ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ’ ಎಂದು ಶಿವಸೇನೆ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಸೋಮವಾರ ಇಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಎನ್‌ಡಿಎ ಜತೆಗಿನ ಸಖ್ಯವನ್ನೂ ಸೇನೆ ತೊರೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ADVERTISEMENT

ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡ ಬಳಿಕವೂ ಶಿವಸೇನೆ ದೆಹಲಿಯಲ್ಲಿ ಅಧಿಕಾರಕ್ಕೆ ‘ಅಂಟಿಕೊಂಡಿದೆ‘ ಎಂದು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಭಾನುವಾರ ಟೀಕಿಸಿದ ಬೆನ್ನಲ್ಲೇ ಈ ಸೇನೆಯ ನಿರ್ಧಾರ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.