ನವದೆಹಲಿ (ಪಿಟಿಐ): ‘ವಿದೇಶಗಳ ಬ್್ಯಾಂಕುಗಳಲ್ಲಿ ಕಪ್ಪುಹಣ ಇರಿಸಿರುವವರ ಇಡೀ ಪಟ್ಟಿಯನ್ನು ಸರ್ಕಾರವು ಬುಧವಾರ ಸುಪ್ರೀಂಕೋರ್ಟ್ ಮುಂದಿಡಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಈ ವಿಷಯದಲ್ಲಿ ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದ ಅವರು, ಸರ್ಕಾರವೇ ಹೆಸರನ್ನು ಬಹಿರಂಗಪಡಿಸಲಿದೆಯೇ ಎಂಬ ಬಗ್ಗೆ ಏನನ್ನೂ ಹೇಳಲಿಲ್ಲ.
‘ಸರ್ಕಾರವು ಈಗಾಗಲೇ ಈ ಹೆಸರಿನ ಪಟ್ಟಿಯನ್ನು ಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ ಜೂನ್ ೨೭ರಂದು ಸಲ್ಲಿಸಿದೆ. ಕಾನೂನಿಗೆ ಅನುಗುಣವಾಗಿ ಈ ಸಮಸ್ಯೆಯ ಮೂಲಕ್ಕೆ ಕೈಹಾಕಲು ಸರ್ಕಾರ ಉತ್ಸುಕವಾಗಿದೆ’ ಎಂದರು.
ಭರವಸೆ ಈಡೇರಿಸಿ
ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಕಪ್ಪುಹಣವನ್ನು ವಾಪಸ್ ತರುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕು
– ಕಾಂಗ್ರೆಸ್
ಕಪ್ಪುಹಣ ಹೊಂದಿರುವವರನ್ನು ರಕ್ಷಿಸಲು ಸರ್ಕಾರ ಮಾಡುತ್ತಿದ್ದ ಪ್ರಯತ್ನಕ್ಕೆ ಕೋರ್ಟ್ ಆದೇಶದಿಂದ ತಡೆಬಿದ್ದಿದೆ
– ಅರವಿಂದ್ ಕೇಜ್ರಿವಾಲ್
ಈ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆ ಆಗಿಲ್ಲ
– ರೋಹಟಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.