ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆಗೆ ಸಂಬಂಧಿಸಿದಂತೆ ಇನ್ನೊಂದು ಮಹಾತ್ಯಾಗಕ್ಕೆ ಶಿವಸೇನೆ ಸಿದ್ಧವಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ರಾಮದಾಸ್ ಕದಂ ಹೇಳಿದ್ದಾರೆ.
ಬಿಜೆಪಿ ಜತೆಗಿನ ಸುಮಾರು ಮೂರು ದಶಕಗಳ ಮೈತ್ರಿ ಮುರಿಯದಿರಲು ಈ ಒಪ್ಪಂದಕ್ಕೆ ಬರಲಾಗಿದೆ. ಇದರಡಿ ಅವರಿಗೆ ಹೆಚ್ಚುವರಿಯಾಗಿ ಅವರಿಗೆ ಆರು ಸೀಟುಗಳನ್ನು ಬಿಟ್ಟುಕೊಡಲಾಗಿದೆ. ಪಕ್ಷವು ಇದುವರೆಗೆ ಒಟ್ಟು 18 ಸೀಟುಗಳನ್ನು ತ್ಯಾಗ ಮಾಡಿದೆ. ಆದರೆ, ಇನ್ನು ಈ ರೀತಿಯ ಇನ್ನೊಂದು ಮಹಾತ್ಯಾಗವನ್ನು ಯಾರೂ ನಿರೀಕ್ಷಿಸುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದರು.
ಮಂಗಳವಾರ ಬಿಜೆಪಿ–ಶಿವಸೇನಾ ನಿಲುವು ಸಡಿಲಿಸಿದ್ದರಿಂದ ಸೀಟು ಹಂಚಿಕೆ ಬಿಕ್ಕಟ್ಟು ಸುಸೂತ್ರವಾಗಿ ಬಗೆಹರಿಯಿತು. ಮೈತ್ರಿ ಒಪ್ಪಂದದಂತೆ ಶಿವಸೇನಾ 151 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿಗೆ 130 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಆದರೆ, ಕಾಂಗ್ರೆಸ್ ಮತ್ತು ಎನ್ಸಿಪಿ ನಡುವೆ ಹಗ್ಗಾಜಗ್ಗಾಟ ಇನ್ನೂ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.