ADVERTISEMENT

ಎಎಪಿಗೆ ಪುನಃ ಬೆಂಬಲವಿಲ್ಲ - ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 18 ಮೇ 2014, 12:59 IST
Last Updated 18 ಮೇ 2014, 12:59 IST

ನವದೆಹಲಿ (ಪಿಟಿಐ): ಹೊಸದಾಗಿ ಚುನಾವಣೆ ಎದುರಿಸಲು ಸಿದ್ಧವಿರುವುದಾಗಿ ಭಾನುವಾರ ಹೇಳಿರುವ ದೆಹಲಿ ಕಾಂಗ್ರೆಸ್ ಪುನಃ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಕಾಂಗ್ರೆಸ್‌ನ ಮುಖ್ಯ ವಕ್ತಾರ ಮುಕೇಶ್ ಶರ್ಮಾ ಅವರು `ವಿಧಾನಸಭೆ ವಿಸರ್ಜಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಹೊಸದಾಗಿ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದ ಎಎಪಿಗೆ ದೆಹಲಿಯಲ್ಲಿ ಸರ್ಕಾರ ರಚಿಸುವ ಕುರಿತಂತೆ ಮಾತನಾಡುವ ನೈತಿಕ ಹಕ್ಕಿಲ್ಲ' ಎಂದು ಹೇಳಿದರು.

`ಪುನಃ ಸರ್ಕಾರ ರಚಿಸಲು ಎಎಪಿಗೆ ಬೆಂಬಲ ವಿಸ್ತರಿಸುವ ಪ್ರಶ್ನೆಯೇ ಇಲ್ಲ.  ವಿಧಾನಸಭೆ ವಿಸರ್ಜಿಸುವಂತೆ  ಸುಪ್ರೀಂ ಕೋರ್ಟ್‌ನ ಮೊರೆಹೋದ ಅರವಿಂದ್ ಕೇಜ್ರಿವಾಲ್ ಅವರ ನಾಟಕೀಯ ವರ್ತನೆಯಿಂದ ದೆಹಲಿ ಜನರು ಬೇಸತ್ತಿದ್ದಾರೆ. ಆ ಪಕ್ಷವು ನಾವು ಮತ್ತೊಮ್ಮೆ ಬೆಂಬಲ ನೀಡುವುದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.