ADVERTISEMENT

ಕಸ ಚೆಲ್ಲಿ ಗುಡಿಸಿ ಚಿತ್ರ ತೆಗೆಸಿಕೊಂಡರು!

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2014, 10:27 IST
Last Updated 7 ನವೆಂಬರ್ 2014, 10:27 IST

ನವದೆಹಲಿ (ಪಿಟಿಐ): ಸ್ವಚ್ಛ ಭಾರತ ಅಭಿಯಾನ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಜುಗರ ತರುವಂತೆ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್‌ ಉಪಾಧ್ಯಾಯ ಅವರು ಛಾಯಾಚಿತ್ರ ತೆಗೆಸಿಕೊಳ್ಳುವುದಕ್ಕಾಗಿ ಕಸವನ್ನು ಮುಂಚಿತವಾಗಿ ಚೆಲ್ಲಿ ಅದನ್ನು ಗುಡಿಸಿದ ಘಟನೆ ವರದಿಯಾಗಿದೆ.

ದೆಹಲಿಯ ಪ್ರತಿಷ್ಠಿತ ಲೋಧಿ ಎಸ್ಟೇಟ್‌ ಪ್ರದೇಶದಲ್ಲಿ ಸ್ವಚ್ಛವಾಗಿರುವ  ಇಂಡಿಯಾ ಇಸ್ಲಾಮಿಕ್‌ ಕೇಂದ್ರದ ಎದುರು ಕಸವನ್ನು ಚೆಲ್ಲಿ ಅದನ್ನು ಗುಡಿಸುವಾಗ ಉಪಾಧ್ಯಾಯ ಮತ್ತಿತರರು ಛಾಯಾಚಿತ್ರ ತೆಗೆಸಿಕೊಂಡಿದ್ದಾರೆ.

ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ. ಆಮ್‌ ಆದ್ಮಿ ಪಕ್ಷದ ಮಾಜಿ ನಾಯಕಿ ಶಾಜಿಯಾ ಇಲ್ಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.