ತಿರುವನಂತಪುರ (ಐಎಎನ್ಎಸ್): ಕೇರಳದ ಎರ್ನಾಕುಲಂ, ಕೊಟ್ಟಾಯಂ, ತಿರುವನಂತಪುರ, ಕೋಯಿಕ್ಕೋಡ್ ಹಾಗೂ ತ್ರಿಶೂರ್ ಜಿಲ್ಲೆಗಳಲ್ಲಿ ಬುಧವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕನಿಷ್ಠ ಇಬ್ಬರು ಬಲಿಯಾಗಿದ್ದಾರೆ.
ಭಾರಿ ಮಳೆ ಕಾರಣದಿಂದ ಜೆಡ್ಡಾ ಮತ್ತು ಕೋಯಿಕ್ಕೋಡ್ ಮಾರ್ಗದ ಸೌದಿ ಏರ್ಲೈನ್ಸ್ ವಿಮಾನವನ್ನು ಕೊಲಂಬೊಗೆ ತೆರಳುವಂತೆ ಸೂಚಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಭಾರಿ ಗುಡುಗಿನೊಂದಿಗೆ ಸುರಿಯುತ್ತಿರುವ ಮಳೆ ಶನಿವಾರದವರೆಗೂ ಮುಂದುವರೆಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.