ADVERTISEMENT

ಕೇರಳದಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 8 ಮೇ 2014, 19:30 IST
Last Updated 8 ಮೇ 2014, 19:30 IST

ತಿರುವನಂತಪುರ (ಐಎಎನ್‌ಎಸ್‌): ಕೇರಳದ ಎರ್ನಾಕುಲಂ, ಕೊಟ್ಟಾಯಂ, ತಿರುವನಂತಪುರ, ಕೋಯಿಕ್ಕೋಡ್ ಹಾಗೂ ತ್ರಿಶೂರ್‌ ಜಿಲ್ಲೆಗಳಲ್ಲಿ ಬುಧ­ವಾರ­ದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕನಿಷ್ಠ ಇಬ್ಬರು ಬಲಿಯಾಗಿದ್ದಾರೆ.

ಭಾರಿ ಮಳೆ ಕಾರಣ­ದಿಂದ ಜೆಡ್ಡಾ ಮತ್ತು ಕೋಯಿಕ್ಕೋಡ್‌ ಮಾರ್ಗದ ಸೌದಿ ಏರ್‌ಲೈನ್ಸ್‌ ವಿಮಾನ­ವನ್ನು ಕೊಲಂಬೊಗೆ ತೆರಳುವಂತೆ ಸೂಚಿಸ­­ಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಾಜ್ಯದಲ್ಲಿ ಭಾರಿ ಗುಡುಗಿನೊಂದಿಗೆ ಸುರಿಯುತ್ತಿರುವ ಮಳೆ ಶನಿವಾರದ­ವರೆಗೂ ಮುಂದುವರೆಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.