ADVERTISEMENT

ಕೊನೆಗೂ ಕನ್ನಡಿಗರ ಕ್ಷಮೆ ಕೋರಿದ ತಮಿಳು ನಟ ಸತ್ಯರಾಜ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 7:35 IST
Last Updated 21 ಏಪ್ರಿಲ್ 2017, 7:35 IST
ಕೊನೆಗೂ ಕನ್ನಡಿಗರ ಕ್ಷಮೆ ಕೋರಿದ ತಮಿಳು ನಟ ಸತ್ಯರಾಜ್‌
ಕೊನೆಗೂ ಕನ್ನಡಿಗರ ಕ್ಷಮೆ ಕೋರಿದ ತಮಿಳು ನಟ ಸತ್ಯರಾಜ್‌   

ಚೆನ್ನೈ: ಬಾಹುಬಲಿ–2 ಸಿನಿಮಾದ ತಮಿಳು ನಟ ಸತ್ಯರಾಜ್‌ ಅವರು  ಕನ್ನಡ ಹೋರಾಟಗಾರರ ಹೋರಾಟಕ್ಕೆ ತಲೆಬಾಗಿ ಕೊನೆಗೂ ಕನ್ನಡಿಗರ ಕ್ಷಮೆ ಕೋರಿದ್ದಾರೆ.

ಸತ್ಯರಾಜ್‌ ಅವರು ಕ್ಷಮೆ ಕೋರಿರುವ ಬಗ್ಗೆ  ಇಂಗ್ಲಿಷ್‌ನ ನ್ಯೂಸ್‌ 18 ಸುದ್ದಿ ಸಂಸ್ಥೆ ವರದಿ ಮಾಡಿದೆ.

9 ವರ್ಷಗಳ ಹಿಂದೆ ಕಾವೇರಿ ಗಲಾಟೆ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗೆ  ನೋವಾಗಿದ್ದರೆ  ಕ್ಷಮಿಸಿ ಎಂದು ಸತ್ಯರಾಜ್‌ ಕ್ಷಮೆ ಕೋರಿದ್ದಾರೆ.

ADVERTISEMENT

ನಾನು ಕನ್ನಡ ವಿರೋಧಿ ಅಲ್ಲ, ಕನ್ನಡಿಗರಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಇರಲಿ, ನನ್ನನ್ನು ಕ್ಷಮಿಸಿ ಬಾಹುಬಲಿ–2 ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಿ ಎಂದು ಸತ್ಯರಾಜ್‌ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.

[related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.