ADVERTISEMENT

ಗುಂಡಿನ ದಾಳಿ: ಸೇನಾಧಿಕಾರಿ ಹತ್ಯೆ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಗುಂಡಿನ ದಾಳಿ: ಸೇನಾಧಿಕಾರಿ ಹತ್ಯೆ
ಗುಂಡಿನ ದಾಳಿ: ಸೇನಾಧಿಕಾರಿ ಹತ್ಯೆ   

ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಮಂಗಳವಾರ ಪಾಕಿಸ್ತಾನದ ದಾಳಿಯಲ್ಲಿ ಗಾಯಗೊಂಡಿದ್ದ ಸೇನೆಯ ಕಿರಿಯ ಅಧಿಕಾರಿ ಶಶಿ ಕುಮಾರ್ ಬುಧವಾರ ಮೃತಪಟ್ಟರು.

ಈ ಘಟನೆಯಲ್ಲಿ ಸಿಪಾಯಿ ಜಸ್‌ಪ್ರೀತ್ ಸಿಂಗ್ ಎಂಬುವವರು ಮಂಗಳವಾರವೇ ಮೃತಪಟ್ಟಿದ್ದರು.

ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ಬಾಲಕೋಟೆ ವಲಯದಲ್ಲಿ ಗಡಿನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಸೈನಿಕರು ಸತತ ಮೂರನೇ ದಿನ ಬುಧವಾರವೂ ಗುಂಡಿನ ದಾಳಿ ಮುಂದುವರಿಸಿದ್ದಾರೆ. ಅವರಿಗೆ ನಮ್ಮ ಸೈನಿಕರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದು ಗುಂಡಿನ ಕಾಳಗ ಆಗಾಗ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.