ADVERTISEMENT

ಜಲ್ಲಿಕಟ್ಟು ಸ್ಪರ್ಧೆ: ಇಬ್ಬರು ಬಲಿ; 28 ಮಂದಿ ಗಾಯ

ಪಿಟಿಐ
Published 22 ಜನವರಿ 2017, 11:05 IST
Last Updated 22 ಜನವರಿ 2017, 11:05 IST
ಜಲ್ಲಿಕಟ್ಟು ಸ್ಪರ್ಧೆ: ಇಬ್ಬರು ಬಲಿ; 28 ಮಂದಿ ಗಾಯ
ಜಲ್ಲಿಕಟ್ಟು ಸ್ಪರ್ಧೆ: ಇಬ್ಬರು ಬಲಿ; 28 ಮಂದಿ ಗಾಯ   

ಮಧುರೈ: ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿಯನ್ನು ಪಳಗಿಸುವ ಸಾಹಸದಲ್ಲಿ ಇಬ್ಬರು ದುರಂತ ಸಾವುಕಂಡಿದ್ದು, 28 ಮಂದಿ ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ ಭಾನುವಾರ ಸಂಭವಿಸಿದೆ. ಇನ್ನು ಮಧುರೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಒಬ್ಬ ನಿರ್ಜಲೀಕರಣದಿಂದ ಮೃತಪಟ್ಟಿದ್ದಾರೆ.

ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ರಾಪೊಸಲ್‌ನಲ್ಲಿ ಆಯೋಜಿಸಿದ್ದ ಸ್ಪೆರ್ಧೆಯಲ್ಲಿ ಹೋರಿಯನ್ನು ಪಳಗಿಸಲು ಯತ್ನಿಸಿದ್ದ ವ್ಯಕ್ತಿಗಳನ್ನು ಹೋರಿಯು ಕೊಂಬಿನಿಂದ ಚಿಮ್ಮಿ ಎಸೆದಿದ್ದು, ಇಬ್ಬರು ಸಾವಿಗೀಡಾಗಿದ್ದಾಗಿ ವರದಿಯಾಗಿದೆ.

ಜಲ್ಲಿಕಟ್ಟು ಆಚರಣೆಗೆ ಸುಗ್ರೀವಾಜ್ಞೆ ಸಾಲದು; ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿ ಮಧುರೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಒಬ್ಬ ನಿರ್ಜಲೀಕರಣಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‍ಪುದುಕೊಟ್ಟೈನಲ್ಲಿ ಸ್ಪರ್ಧೆ ವೇಳೆ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.