ರಾಮೇಶ್ವರಂ: ಇಲ್ಲಿನ ನೆಡುಂತೀವು ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ತಮಿಳುನಾಡಿನ 10 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಶುಕ್ರವಾರ ಬಂಧಿಸಿದೆ.
ದೋಣಿ ಸಹಿತ ಬಂಧಿತರನ್ನು ಕಂಗೆಸಂಥುರೈ ಎಂಬಲ್ಲಿಗೆ ಕರೆದೊಯ್ಯಲಾಗಿದ್ದು, ನೌಕಾಪಡೆಯ ಶಿಬಿರದಲ್ಲಿ ಇರಿಸಲಾಗಿದೆ. 10 ಮೀನುಗಾರರು ಅಕ್ಕರಪೆಟೈ ಜಿಲ್ಲೆಯವರು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ನವೆಂಬರ್ 7ರಂದು ಪುಡುಕೊಟೈ ಜಿಲ್ಲೆಯ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.