ADVERTISEMENT

ದಲಿತ ವ್ಯಕ್ತಿಯ ಹತ್ಯೆ: ಐವರ ಬಂಧನ

ಚಿಂದಿ ಆಯುತ್ತಿದ್ದ ದಂಪತಿಯನ್ನು ಕಳ್ಳರೆಂದು ಭಾವಿಸಿ ಮನಸೋ ಇಚ್ಛೆ ಹಲ್ಲೆ

ಪಿಟಿಐ
Published 21 ಮೇ 2018, 19:55 IST
Last Updated 21 ಮೇ 2018, 19:55 IST
ದಲಿತ ವ್ಯಕ್ತಿಯ ಹತ್ಯೆ: ಐವರ ಬಂಧನ
ದಲಿತ ವ್ಯಕ್ತಿಯ ಹತ್ಯೆ: ಐವರ ಬಂಧನ   

ರಾಜಕೋಟ್‌ (ಗುಜರಾತ್‌): ಚಿಂದಿ ಆಯುತ್ತಿದ್ದ ದಲಿತ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ ಹಲ್ಲೆ ನಡೆಸಿ ಕೊಂದು ಹಾಕಿದ ಐವರನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ.

ಮುಕೇಶ ವಾನಿಯಾ (35) ಎಂಬ ವ್ಯಕ್ತಿಯ ಸೊಂಟಕ್ಕೆ ಹಗ್ಗ ಕಟ್ಟಿ ಒಬ್ಬಾಟ ಹಿಡಿದುಕೊಂಡಿದ್ದರೆ ಉಳಿದವರು ಕೋಲಿನಿಂದ ಮನಸೋ ಇಚ್ಛೆ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವಡ್‌ಗಾಂ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೆವಾನಿ ಈ ಕೃತ್ಯದ ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.