ADVERTISEMENT

ನಟಿ ಶ್ರೀದೇವಿ ಅಕಾಲಿಕ ನಿಧನ ದುಃಖ ತಂದಿದೆ: ಪ್ರಧಾನಿ ಮೋದಿ ಸಂತಾಪ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 6:03 IST
Last Updated 25 ಫೆಬ್ರುವರಿ 2018, 6:03 IST
ನಟಿ ಶ್ರೀದೇವಿ ಚಿತ್ರ: ‍ಪಿಟಿಐ
ನಟಿ ಶ್ರೀದೇವಿ ಚಿತ್ರ: ‍ಪಿಟಿಐ   

ನವದೆಹಲಿ: ಬಾಲಿವುಡ್‌ ನಟಿ ಶ್ರೀದೇವಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್‌ ತಾರೆ ಸಚಿನ್ ತೆಂಡೂಲ್ಕರ್, ನಟರಾದ ರಜನಿಕಾಂತ್‌, ಕಮಲ್‌ ಹಾಸನ್‌ ಸೇರಿದಂತೆ ಸಿನಿಮಾ ಕ್ಷೇತ್ರದ ಗಿದ್ಗಜರು ಹಾಗೂ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಭಿನಯದ ಮೂಲಕ ಎಲ್ಲರ ಮನಗೆದ್ದ ನಟಿಯ ನಿಧನದ ಸುದ್ದಿ ನೋವುಂಟು ಮಾಡಿದೆ ಎಂದು ಬಹುತೇಕ ಮಂದಿ ಹೇಳಿದ್ದಾರೆ.

‘ಪ್ರಸಿದ್ಧ ನಟಿ ಶ್ರೀದೇವಿ ಅವರ ಅಕಾಲಿಕ ಮರಣದಿಂದ ದುಃಖಿತನಾದೆ. ಅವರು ಚಲನಚಿತ್ರ ಉದ್ಯಮದ ಹಿರಿಯರು, ಅವರ ಸುದೀರ್ಘ ವೃತ್ತಿಜೀವನದಲ್ಲಿ ವೈವಿಧ್ಯಮಯ ಪಾತ್ರಗಳು ಮತ್ತು ಸ್ಮರಣೀಯ ಅಭಿನಯಗಳು ಇದ್ದವು. ದುಃಖದ ಈ ವೇಳೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ. ಅವರ ಆತ್ಮಕ್ಕೆ ಶಾಂತಿಯು ಲಭಿಸಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.