ADVERTISEMENT

ಪವಾರ್‌್ ಹೇಳಿಕೆ ಹಾಸ್ಯಾಸ್‍ಪದ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ನವದೆಹಲಿ (ಐಎನ್‌ಎಸ್‌): ಕಾಂಗ್ರೆಸ್‌್ ಮುಖಂಡರೊಬ್ಬರು ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿ ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌್ ನೀಡಿದ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್‌್ ಪ್ರತಿಕ್ರಿಯಿಸಿದೆ.

‘ಶಿವಸೇನಾದಂಥ ಪಕ್ಷಗಳಿಗೆ ನಾವು ಹಿಂದೆಂದೂ ಬೆಂಬಲ ಕೊಟ್ಟಿಲ್ಲ. ಮುಂದೆಯೂ  ಕೊಡುವುದಿಲ್ಲ’ ಎಂದು ಕಾಂಗ್ರೆಸ್‌್ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌್ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದಕ್ಕೆ ಬಿಜೆಪಿಗೆ ಬಾಹ್ಯ ಬೆಂಬಲ  ಕೊಡುವುದಾಗಿ ಎನ್‌ಸಿಪಿ ನೀಡಿರುವ ಆಹ್ವಾನವನ್ನು ಕೂಡ ಮಾಕನ್‌್ ಟೀಕಿಸಿದ್ದಾರೆ.

  ‘ಹಫ್ತಾ ವಸೂಲಿ ಪಕ್ಷದ ಜತೆ ಮೈತ್ರಿ ಮಾಡುವುದು ಅಥವಾ ಬಿಡುವುದು ಬಿಜೆಪಿಗೆ ಬಿಟ್ಟ ವಿಷಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.