ನವದೆಹಲಿ (ಪಿಟಿಐ): ಹಿಂದಿ ದೈನಿಕ ‘ಜಾಗರಣ’ದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಮೋಹನ್ ಗುಪ್ತ ಅವರು ಭಾರತೀಯ ಪತ್ರಿಕಾ ಮಂಡಳಿ (ಪಿಟಿಐ) ಅಧ್ಯಕ್ಷರಾಗಿ ಮತ್ತು ‘ಬಾಂಬೆ ಸಮಾಚಾರ’ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಹೊರ್ಮುಸ್ಜಿ ಎನ್ ಕಾಮಾ ಉಪಾಧ್ಯಕ್ಷರಾಗಿ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿ, ಇಂಗ್ಲಿಷ್, ಪಂಜಾಬ್ ಮತ್ತು ಗುಜರಾತಿ ಪ್ರಕಟಣೆಗಳ ಜತೆಗೆ ಪ್ರತಿನಿತ್ಯ 34 ಮುದ್ರಣಗಳನ್ನು ಪ್ರಕಟಿಸುವ ಜಾಗರಣ ಪ್ರಕಾಶನಕ್ಕೂ ಗುಪ್ತ ಸಂಪಾದಕ ಮಂಡಳಿಯ ನಿರ್ದೇಶಕರಾಗಿದ್ದಾರೆ.
ಗುಪ್ತ, ಕಾಮಾ ಮತ್ತು ನಿರ್ಗಮಿತ ಅಧ್ಯಕ್ಷ ‘ಪ್ರಜಾವಾಣಿ‘ ಸಂಪಾದಕ ಕೆ.ಎನ್.ಶಾಂತಕುಮಾರ್ ಅವರು ಸೇರಿದಂತೆ ಟೈಮ್ಸ್ ಆಫ್ ಇಂಡಿಯಾದ ವಿನೀತ್ ಜೈನ್, ಹಿಂದಿ ಸಮಾಚಾರ್ನ ವಿಜಯ್ ಕುಮಾರ ಛೋಪ್ರಾ, ದಿ. ಹಿಂದೂ ಪತ್ರಿಕೆಯ ಎನ್.ರವಿ, ಆನಂದ ಬಜಾರ್ ಪತ್ರಿಕೆಯ ಅವೀಕ್ ಕುಮಾರ್ ಸರ್ಕಾರ್, ಮಾತೃಭೂಮಿಯ ಎಂ.ಪಿ.ವೀರೇಂದ್ರ ಕುಮಾರ್, ದಿನ್ಮಲಾರ್ ಪತ್ರಿಕೆಯ ಆರ್. ಲಕ್ಷ್ಮೀಪತಿ, ಮಲಯಾಳಂ ಮನೋರಮಾದ ರಿಯದ್ ಮ್ಯಾಥ್ಯೂ, ಹಿಂದೂಸ್ತಾನ ಟೈಮ್ಸ್ನ ಸಂಜಯ್ ನಾರಾಯಣ್ ಮತ್ತು ಇಂಡಿಯನ್ ಎಕ್ಸ್ಪ್ರೆಸ್ನ ವಿವೇಕ್ ಗೋಯೆಂಕಾ ಅವರು ಪಿಟಿಐ ಆಡಳಿತ ಮಂಡಳಿ ಸದಸ್ಯರಾಗಿರುತ್ತಾರೆ. ಪಿಟಿಐ ಆಡಳಿತ ಮಂಡಳಿಯ 66ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.