ADVERTISEMENT

ಮಾಲೆಗಾಂವ್‌ ಸ್ಫೋಟ: ಆರೋಪಿ ಅರ್ಜಿ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:53 IST
Last Updated 18 ಏಪ್ರಿಲ್ 2014, 19:53 IST

ಮುಂಬೈ (ಪಿಟಿಐ): 2006ರ ಮಾಲೆಗಾಂವ್  ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಯಾದ ಒಂಬತ್ತು ಜನ ಮುಸ್ಲಿಮರು ಮಾಡಿಕೊಂಡ ಮನವಿ ತಿರಸ್ಕರಿಸುವಂತೆ ಕೋರಿ ಹಿಂದೂ ಸಂಘಟನೆಯ ಮನೋಹರ್‌ ಸಿಂಗ್‌ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಿರಸ್ಕರಿಸಿದೆ.

ತಮ್ಮನ್ನು ಪ್ರಕರಣದಿಂದ ಮುಕ್ತ­ಗೊಳಿಸಲು ಕೋರಿ  9 ಜನ ಮುಸ್ಲಿ­ಮರು ಮನವಿ ಮಾಡಿಕೊಂಡಿದ್ದಾರೆ. ಸ್ಫೋಟದ ಹಿಂದೆ ಹಿಂದು ಸಂಘಟ­ನೆಯ  ಕೈವಾಡ ಇದೆ ಎಂದಿರುವ ಎನ್‌ಐಎ ಈ ಸಂಬಂಧ ಮನೋ­ಹರ್‌ ಸಿಂಗ್‌ ಸೇರಿದಂತೆ ನಾಲ್ವರ ಮೇಲೆ ಆರೋಪಪಟ್ಟಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.