ಚೆನ್ನೈ (ಪಿಟಿಐ): ಮುಲ್ಲಪೆರಿಯಾರ್ ಅಣೆಕಟ್ಟೆಯ ನೀರಿನ ಸಂಗ್ರಹ 142 ತಲುಪಿರುವುದರಿಂದ 117 ವರ್ಷಗಳಷ್ಟು ಹಳೆಯದಾದ ಅಣೆಕಟ್ಟೆ ಒಡೆದು ಅಪಾಯವಾಗುವ ಆತಂಕವನ್ನು ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ.
ನೆರೆಯ ರಾಜ್ಯದ ಜತೆ ನೀರು ಹಂಚಿಕೆ ವಿಚಾರದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.
‘ಅಣೆಕಟ್ಟೆಗೆ 117 ವರ್ಷಗಳಾಗಿರುವುದರಿಂದ ತೀರಾ ದುರ್ಬಲಗೊಂಡಿದ್ದು, ಅದರ ಹತ್ತಿರ ವಾಸಿಸುತ್ತಿರುವ ಜನರ ಸುರಕ್ಷತೆ ಬಗ್ಗೆ ನಮಗೆ ಆತಂಕವಾಗಿದೆ’ ಎಂದು ತಿಳಿಸಿದ್ದಾರೆ.
‘ತಮಿಳುನಾಡಿನ ಐದಾರು ಜಿಲ್ಲೆಗಳು ಈ ಅಣೆಕಟ್ಟೆಯ ನೀರನ್ನೇ ಅವಲಂಬಿಸಿವೆ ಎಂಬುದು ನಿಜ. ಆದರೆ ಅಣೆಕಟ್ಟೆ ದುರ್ಬಲಗೊಂಡಿರುವುದರಿಂದ ಜನತೆಯ ಸುರಕ್ಷತೆಯನ್ನೂ ಗಂಭೀರವಾಗಿ ಪರಿಗಣಿಸಬೇಕಾಗಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.