ADVERTISEMENT

ಮೇ 25ರ ವರೆಗೂ ಪ್ರತಿಭಟನೆ ಕೈಬಿಟ್ಟ ತಮಿಳುನಾಡು ರೈತರು

ಏಜೆನ್ಸೀಸ್
Published 23 ಏಪ್ರಿಲ್ 2017, 18:45 IST
Last Updated 23 ಏಪ್ರಿಲ್ 2017, 18:45 IST
ಮೇ 25ರ ವರೆಗೂ ಪ್ರತಿಭಟನೆ ಕೈಬಿಟ್ಟ ತಮಿಳುನಾಡು ರೈತರು
ಮೇ 25ರ ವರೆಗೂ ಪ್ರತಿಭಟನೆ ಕೈಬಿಟ್ಟ ತಮಿಳುನಾಡು ರೈತರು   

ನವದೆಹಲಿ: ಸಾಲ ಮನ್ನಾ ಮತ್ತು ಬರ ಪರಿಹಾರಕ್ಕಾಗಿ ಆಗ್ರಹಿಸಿ 41 ದಿನಗಳಿಂದ ಇಲ್ಲಿನ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ರೈತರು ಭಾನುವಾರ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಪಳನಿ ಸ್ವಾಮಿ ಅವರು ಮಧ್ಯಪ್ರವೇಶ ಮಾಡಿ ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡಿರುವುದರಿಂದ ಮೇ 25ರ ವರೆಗೂ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ಪ್ರತಿಭಟನಾ ರೈತರು ತಿಳಿಸಿದ್ದಾರೆ.

ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲಿ ಮಾತನಾಡಿದ್ದು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ್ದಾರೆ  ಎಂದು ತಮಿಳುನಾಡು ಸರ್ಕಾರದ  ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.