ADVERTISEMENT

ಯಾಕೂಬ್‌ಗೆ ಗಲ್ಲು ಜಾರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 4:44 IST
Last Updated 30 ಜುಲೈ 2015, 4:44 IST

ನಾಗ್ಪುರ (ಐಎಎನ್‌ಎಸ್‌): 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್‌ ಮೆಮನ್‌ನನ್ನು ಟಾಡಾ ಕೋರ್ಟ್‌ ಆದೇಶದಂತೆ ಗುರುವಾರ ಬೆಳಿಗ್ಗೆ ಗಲ್ಲಿಗೆ ಏರಿಸಲಾಗಿದೆ.

ಬೆಳಿಗ್ಗೆ 6.35ಕ್ಕೆ ಯಾಕೂಬ್‌ನನ್ನು ಗಲ್ಲಿಗೇರಿಸಲಾಗಿದೆ. ವೈದ್ಯರು ಆತ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

ಯಾಕೂಬ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಾಗ್ಪುರ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಯಾಕೂಬ್‌ನನ್ನು ಗಲ್ಲಿಗೇರಿಸಿರುವುದರಿಂದ ಮುಂಬೈನಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ.

ಕೊನೆ ಪ್ರಯತ್ನವೂ ವಿಫಲ: ತಡರಾತ್ರಿಯ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್‌ ಮಾರ್ಗಸೂಚಿಯಲ್ಲಿನ ಅವಕಾಶಗಳ ಅಡಿಯಲ್ಲಿ ಯಾಕೂಬ್‌ ಗಲ್ಲುಶಿಕ್ಷೆ ಜಾರಿಯನ್ನು 14 ದಿನಗಳವರೆಗೆ ತಡೆಹಿಡಿಯಲು ಯಾಕೂಬ್ ಪರ ವಕೀಲರು ಪ್ರಯತ್ನ ನಡೆಸಿದರು. ಆದರೆ ಆ ಪ್ರಯತ್ನವೂ ಯಶಸ್ವಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.