ನವದೆಹಲಿ: ಗುಜರಾತ್ ಸರ್ಕಾರದ ಪರವಾಗಿ ಹಲವಾರು ವ್ಯಾಜ್ಯಗಳಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ರಂಜಿತ್ ಕುಮಾರ್ ಅವರು ನೂತನ ಸಾಲಿಸಿಟರ್ ಜನರಲ್ ಆಗಿ ನೇಮಕಗೊಳ್ಳುವುದು ಖಚಿತವಾಗಿದೆ.
ಸಾಂವಿಧಾನಿಕ ಕಾನೂನು, ಸೇವಾ ವಿಷಯಗಳು, ತೆರಿಗೆ ಹಾಗೂ ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಪರಿಣತರಾಗಿರುವ ರಂಜಿತ್ ಕುಮಾರ್ ಹೆಸರನ್ನು ಸಂಪುಟದ ನೇಮಕಾತಿ ಸಮಿತಿಯು ಅಂತಿಮಗೊಳಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ಹಿರಿಯ ವಕೀಲರಾದ ಮನೀಂದರ್ ಸಿಂಗ್, ಎಲ್.ನಾಗೇಶ್ವರ್ ರಾವ್, ತುಷಾರ್ ಮೆಹ್ತಾ, ಪಿ.ಎಸ್.ಪಟ್ವಾಲಿಯಾ ಹಾಗೂ ನೀರಜ್ ಕಿಶನ್ ಕೌಲ್ ಅವರ ಹೆಸರನ್ನು ಸಮಿತಿ ಅಂತಿಮಗೊಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.