ನವದೆಹಲಿ: ಗಣಿ ಸಚಿವಾಲಯದ ಅನುಮತಿ ಪಡೆದ ಕಂಪನಿಗಳಿಗೆ ಶೀಘ್ರವೇ ಮಂಜೂರಾತಿ ಆದೇಶಗಳನ್ನು ನೀಡುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಖನಿಜ ಶೋಧನಾ ಪರವಾನಗಿ (ಪಿಎಲ್) ಅಥವಾ ಗಣಿ ಪರವಾನಗಿ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಗಣಿ ಸಚಿವಾಲಯ ಅನುಮತಿ ನೀಡುತ್ತಿದ್ದಂತೆಯೇ ರಾಜ್ಯ ಸರ್ಕಾರಗಳು ಮಂಜೂರಾತಿ ಆದೇಶ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.
ಗಣಿ ಸಚಿವಾಲಯದ ಅನುಮತಿ ಪಡೆದ ಒಂದು ತಿಂಗಳೊಳಗೆ ಅಂತಿಮ ಮಂಜೂರಾತಿ ಆದೇಶ ನೀಡಬೇಕು ಎಂದು ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಪ್ರಸ್ತುತ ಪಿಎಲ್ ನೀಡಲು ೯ ತಿಂಗಳ ಕಾಲಮಿತಿ ಇದ್ದರೆ, ಗಣಿ ಪರವಾನಗಿ ನೀಡಲು ೧೨ ತಿಂಗಳ ಕಾಲಮಿತಿ ನಿಗದಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.