ADVERTISEMENT

ವಾಜಪೇಯಿ ಆಶೀರ್ವಾದ ಪಡೆದ ರಾಮನಾಥ ಕೋವಿಂದ್‌

ಪಿಟಿಐ
Published 22 ಜೂನ್ 2017, 10:35 IST
Last Updated 22 ಜೂನ್ 2017, 10:35 IST
ರಾಮನಾಥ ಕೋವಿಂದ್‌
ರಾಮನಾಥ ಕೋವಿಂದ್‌   

ನವದೆಹಲಿ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ್‌ ಅವರು ಗುರುವಾರ ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಬುಧವಾರ ಭೇಟಿಯಾಗಿದ್ದರು.

ಬಿಜೆಪಿ ಮುಖಂಡರಾದ ರಾಮ್‌ಲಾಲ್‌ ಮತ್ತು ಭೂಪೇಂದ್ರ ಯಾದವ್‌ ಅವರ ಜತೆ ಕೋವಿಂದ್‌ ಅವರು ಬೆಳಿಗ್ಗೆ ಜೋಷಿ ಅವರನ್ನು ಭೇಟಿಯಾದರು. ಸಂಜೆ ಅಡ್ವಾಣಿ ಅವರನ್ನು ಭೇಟಿಯಾದರು. ಈ ಇಬ್ಬರ ಹೆಸರು ಕೂಡ ರಾಷ್ಟ್ರಪತಿ ಹುದ್ದೆಗೆ ಕೇಳಿ ಬಂದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.