ADVERTISEMENT

ಶ್ರೀನಗರದಲ್ಲಿ ಘರ್ಷಣೆ: 24 ಜನರಿಗೆ ಗಾಯ

ಪಿಟಿಐ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಕಾಶ್ಮೀರದಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ ಕಲ್ಲುಗಳನ್ನು ತೂರಿದ ವಿದ್ಯಾರ್ಥಿಗಳು
ಕಾಶ್ಮೀರದಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ ಕಲ್ಲುಗಳನ್ನು ತೂರಿದ ವಿದ್ಯಾರ್ಥಿಗಳು   

ಶ್ರೀನಗರ : ವಿದ್ಯಾರ್ಥಿಗಳು ಹಾಗೂ ಭದ್ರತಾ ಪಡೆಗಳ ನಡುವೆ ಶ್ರೀನಗರ ಕೇಂದ್ರ ಭಾಗದಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ 12 ಜನ ಭದ್ರತಾ ಸಿಬ್ಬಂದಿ ಸೇರಿದಂತೆ 24 ಜನ ಗಾಯಗೊಂಡಿದ್ದಾರೆ.

ಸರ್ಕಾರದ ಆದೇಶದ ಅನುಸಾರ ಕಾಲೇಜುಗಳನ್ನು ಐದು ದಿನ ಮುಚ್ಚಲಾಗಿತ್ತು. ಅವು ಪುನರಾರಂಭಗೊಂಡ ಕೆಲವೇ ಹೊತ್ತಿನಲ್ಲಿ ಈ ಘರ್ಷಣೆ ನಡೆದಿದೆ.

ರೆಸಿಡೆನ್ಸಿ ರಸ್ತೆ ಹಾಗೂ ಎಂ.ಎ. ರಸ್ತೆಗಳು ಕದನ ಕಣದಂತೆ ಆಗಿದ್ದವು. ‘ವಿದ್ಯಾರ್ಥಿಗಳು ನಡೆಸಿದ ಕಲ್ಲು ತೂರಾಟದಲ್ಲಿ ಮೂರು ಜನ ಅಧಿಕಾರಿಗಳು ಸೇರಿದಂತೆ 12 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ’ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.