ಮುಂಬೈ (ಐಎಎನ್ಎಸ್) : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಮೊದಲ ಸಚಿವ ಸಂಪುಟ ವಿಸ್ತರಣೆ ಆಗಿದ್ದು, ಪ್ರಮಾಣವಚನ ಕಾರ್ಯಕ್ರಮಕ್ಕೆ ಬಿಜೆಪಿ ಮಿತ್ರಪಕ್ಷವಾದ ಶಿವಸೇನಾವು ಕೊನೆಯ ಕ್ಷಣದಲ್ಲಿ ಗೈರು ಹಾಜರಾಗಿದೆ.
ಕೇಂದ್ರ ಸಚಿವ ಸ್ಥಾನಕ್ಕೆ ತಾನು ಸೂಚಿಸಿದ್ದ ಅನಿಲ್ ವೈ.ದೇಸಾಯಿ ಅವರನ್ನು ದೆಹಲಿಯಿಂದ ಮುಂಬೈಗೆ ವಾಪಸ್ ಕರೆಸಿಕೊಂಡಿದೆ.
ಬಿಜೆಪಿಯು ಮೋದಿ ಅವರ ಸಂಪುಟಕ್ಕೆ ಶಿವಸೇನಾ ಮುಖಂಡ ಸುರೇಶ್ ಪ್ರಭು ಅವರನ್ನು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ನೇಮಕ ಮಾಡಿಕೊಂಡಿದೆ.
ಈ ನಡುವೆ ಸುರೇಶ್ ಪ್ರಭು ಅವರಿಗೆ ನೀಡಿದ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನವನ್ನು ಶಿವಸೇನೆಯು ‘ಇದು ನಮ್ಮ ಆಯ್ಕೆಯಲ್ಲ’ ಎಂದು ಹೇಳಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.