ಹೈದರಾಬಾದ್: ಆಂಧ್ರಪ್ರದೇಶ ಹಾಗೂ ತೆಲಂಗಾಣದ ನಡುವಣ ಸಾಮಾನ್ಯ ನಿಧಿ ಗಳನ್ನು ಸ್ಥಗಿತಗೊಳಿಸುವಂತೆ ತೆಲಂಗಾಣ ಸರ್ಕಾರ ಬ್ಯಾಂಕ್ಗಳನ್ನು ಒತ್ತಾಯಿಸಿದ್ದು, ಇದರಿಂದ ಎರಡೂ ರಾಜ್ಯಗಳ ನಡುವೆ ಸಂಘರ್ಷ ತಾರಕಕ್ಕೆ ಏರಿದೆ.
ತೆಲಂಗಾಣಕ್ಕೆ ಮೀಸಲಿದ್ದ ₨ 609 ಕೋಟಿ ಅನುದಾನವನ್ನು ಆಂಧ್ರಪ್ರದೇಶದ ಐಎಎಸ್ ಅಧಿಕಾರಿ ವಿಜಯವಾಡಕ್ಕೆ ವರ್ಗಾಯಿಸಿರುವುದೇ ತೆಲಂಗಾಣದ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಧಿಕಾರಿ ವಿರುದ್ಧ ತೆಲಂಗಾಣ ಸರ್ಕಾರ ಕ್ರಿಮಿನಲ್ ಮೊಕದ್ದಮೆ ಹೂಡಿದೆ.
ಚಿಕ್ಕದಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಅಧಿಕಾರಿಗಳ ವಿರುದ್ಧ ಮೋಸ ಹಾಗೂ ನಂಬಿಕೆ ದ್ರೋಹ ದೂರು ದಾಖಲಾಗಿದೆ. ಅಲ್ಲದೇ, ಆಂಧ್ರಪ್ರದೇಶದ ಸಚಿವಾಲಯದಲ್ಲಿ ಗುರುವಾರ ಸಂಜೆ ಮುರುಳಿಸಾಗರ್ ಹಾಗೂ ರಾಮಾರಾವ್ ಎಂಬ ಹಿರಿಯ ಐಎಎಸ್ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ನಿವಾಸದ ಕಪಾಟುಗಳಿಂದ ಕೆಲವು ಕಡತ ಹಾಗೂ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.