ನವದೆಹಲಿ (ಪಿಟಿಐ): ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಿಬಿಐ ಮತ್ತು ಪೊಲೀಸ್ ಇಲಾಖೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವಂತೆ ಕೋರಿರುವ ತಮ್ಮ ಬೇಡಿಕೆಯನ್ನು ಶಂಕೆಯಿಂದ ನೋಡುವುದು ಬೇಡ ಎಂದು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಮನವಿ ಮಾಡಿದ್ದಾರೆ.
ಹೆಚ್ಚಿನ ಹಣಕಾಸು ಮತ್ತು ವೃತ್ತಿ ಸ್ವಾತಂತ್ರ್ಯ ಬೇಡಿಕೆಯನ್ನು ರಾಷ್ಟ್ರ ವಿರೋಧಿ ಅಥವಾ ಕಾನೂನಿಗಿಂತ ಮೇಲುಗೈ ಸಾಧಿಸಲು ಸಿಬಿಐ ಹವಣಿಸುತ್ತಿದೆ ಎಂದು ಅಪಾರ್ಥ ಮಾಡಿಕೊಳ್ಳುವುದು ಬೇಡ ಅವರು ಸ್ಪಷ್ಟಪಡಿಸಿದ್ದಾರೆ.
‘ಸಿಬಿಐ ಅಥವಾ ಪೊಲೀಸ್ ವ್ಯವಸ್ಥೆ ಕಾರ್ಯವೈಖರಿ ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಸ್ವಾಯತ್ತತೆ ಕೋರಿದರೆ ಅದನ್ನು ಯಾಕೆ ಸಂಶಯದಿಂದ ನೋಡಬೇಕು’ ಎಂದು ಸಿನ್ಹಾ ಭಾನುವಾರ ಪ್ರಶ್ನಿಸಿದ್ದಾರೆ. 2ಜಿ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ, ಸೇನಾ ವಾಹನ ಖರೀದಿ ಅವ್ಯವಹಾರ ಹಗರಣಗಳ ತನಿಖೆ ವೇಳೆ ಎದುರಾಗುವ ಸವಾಲುಗಳನ್ನು ಅವರು ಬಿಚ್ಚಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.