ADVERTISEMENT

ಸುಬ್ರಮಣಿಯನ್ ಸ್ವಾಮಿಗೆ ಗಮನ ಸೆಳೆಯುವ ಗೀಳು: ವಾದ್ರಾ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 11:43 IST
Last Updated 25 ಜೂನ್ 2016, 11:43 IST
ಸುಬ್ರಮಣಿಯನ್ ಸ್ವಾಮಿಗೆ ಗಮನ ಸೆಳೆಯುವ ಗೀಳು: ವಾದ್ರಾ
ಸುಬ್ರಮಣಿಯನ್ ಸ್ವಾಮಿಗೆ ಗಮನ ಸೆಳೆಯುವ ಗೀಳು: ವಾದ್ರಾ   

ನವದೆಹಲಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರಿಗೆ ಗಮನ ಸೆಳೆಯುವ ಗೀಳು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ಸಚಿವರು ವಿದೇಶಿ ಪೋಷಾಕು ಧರಿಸಿದಾಗ ವೇಟರ್‍ ಗಳಂತೆ ಕಾಣುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದರು. ಸ್ವಾಮಿಯವರು ಅರುಣ್ ಜೇಟ್ಲಿ ಅವರನ್ನು ಉದ್ದೇಶಿಸಿಯೇ ಈ ಟ್ವೀಟ್ ಮಾಡಿದ್ದಾರೆ ಎಂದು ಈ ಬಗ್ಗೆ ಟ್ವೀಟ್ ಚರ್ಚೆಗಳೂ ನಡೆದಿದ್ದವು.

ಇತ್ತೀಚೆಗೆ ಅರುಣ್ ಜೇಟ್ಲಿ ಅವರು ಚೀನಾ ಪ್ರವಾಸ ಕೈಗೊಂಡಾಗ ಅಲ್ಲಿನ ಸಾಂಪ್ರದಾಯಿಕ ಉಡುಗೆ ಬದಲು ಕೋಟ್, ಟೈ ಧರಿಸಿದ್ದರು.

ಸ್ವಾಮಿ ಅವರ ಈ ಟ್ವೀಟ್‍ಗೆ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿರುವ ವಾದ್ರಾ, ವೇಟರ್ ವೃತ್ತಿಗೆ ಯಾವುದೇ ಘನತೆಯಿಲ್ಲ ಎಂದು ಸ್ವಾಮಿ ಅಂದುಕೊಂಡಿದ್ದಾರೆಯೇ?. ಶ್ರಮ ಜೀವಿಗಳಾದ ವೇಟರ್‍ ಗಳ ಬಗ್ಗೆ ಲಘುವಾಗಿ ಮಾತನಾಡಿ ಗಮನ ಸೆಳೆಯಲು ಸುಬ್ರಮಣಿಯನ್ ಸ್ವಾಮಿ ಯತ್ನಿಸುತ್ತಿದ್ದಾರೆ ಎಂದು ಬರೆದಿದ್ದಾರೆ.

ADVERTISEMENT

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.