ನವದೆಹಲಿ: ಹಗರಣಗಳನ್ನು ಬಯಲಿಗೆ ಎಳೆಯಲು ಮಾರುವೇಷದ ಕಾರ್ಯಾಚರಣೆ ನಡೆಸುವ ಪತ್ರಕರ್ತರಿಗೆ ‘ಅನಿರ್ಬಂಧಿತ ಹಕ್ಕು’ ನೀಡುವುದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಪ್ರತಿ ಪ್ರಕರಣದಲ್ಲೂ ಮಾರುವೇಷದ ಕಾರ್ಯಾಚರಣೆ ನಡೆಸಿದ್ದರ ಹಿಂದಿನ ಉದ್ದೇಶವನ್ನು ಪರಿಶೀಲಿಸಿದ ನಂತರವಷ್ಟೇ ಅದು ಶಿಕ್ಷಾರ್ಹವೇ, ಅಲ್ಲವೇ ಎಂಬುದನ್ನು ನಿರ್ಧರಿಸಬಹುದಾಗಿದೆ ಎಂದೂ ಕೋರ್ಟ್ ಹೇಳಿದೆ.
ವಿಸ್ತೃತ ವಿಚಾರಣೆಯ ಸಂದರ್ಭದಲ್ಲಿ ಮಾತ್ರ ಇಂತಹ ಕಾರ್ಯಾಚರಣೆ ಕೈಗೊಳ್ಳುವ ಪತ್ರಕರ್ತರ ಪ್ರಾಮಾಣಿಕತೆ ಅಥವಾ ದುರುದ್ದೇಶ ಸಾಬೀತಾಗುತ್ತದೆ ಎಂದೂ ಕೋರ್ಟ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.