ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಜ.26ರಂದು ನಡೆಯವ ಅದ್ದೂರಿ ಗಣರಾಜ್ಯೋತ್ಸವ ಕಣ್ತುಂಬಿಕೊಳ್ಳಲು ದೇಶದ ಜನ ಕಾತರದಿಂದ ಕಾಯುತ್ತಾರೆ.
ಈ ದಿನವನ್ನು ಅಚ್ಚುಕಟ್ಟು ಮತ್ತು ಸುಂದರಗೊಳಿಸಲು ಸಿದ್ಧತೆಗಳು ನಡೆದಿವೆ. ಶುಕ್ರವಾರ ರಾಜಪಥದಲ್ಲಿ ಸೇನಾಪಡೆಯ ವಿವಿಧ ತಂಡಗಳು ಹಾಗೂ ಅಶ್ವಾರೋಹಿಗಳು ಪಥಸಂಚಲನದ ತಾಲೀಮು ನಡೆಸಿದರು.
ಮೈ ನಡುಗುವ ಚಳಿಯಲ್ಲೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳ ಪೂರ್ವಾಭ್ಯಾಸ ನಡೆಸಿದರು.
ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು.
ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು. ಚಿತ್ರ: ಎಎಫ್ಪಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.