ADVERTISEMENT

ಅಪಾಯಕಾರಿ ಆಡಳಿತದಿಂದ ಜನರನ್ನು ರಕ್ಷಿಸಬೇಕಿದೆ: ಸೋನಿಯಾ

ತುಳಿತಕ್ಕೊಳಗಾದವರ ಪರ ದನಿಯೆತ್ತಲು ರಾಹುಲ್ ಕರೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2018, 9:47 IST
Last Updated 22 ಜುಲೈ 2018, 9:47 IST
ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ –ಪಿಟಿಐ ಚಿತ್ರ
ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ –ಪಿಟಿಐ ಚಿತ್ರ   

ನವದೆಹಲಿ: ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿರುವ ‘ಅಪಾಯಕಾರಿ ಆಡಳಿತ’ದಿಂದ ದೇಶದ ಜನರನ್ನು ರಕ್ಷಿಸಬೇಕಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪ್ರಥಮ ಬಾರಿ ಭಾನುವಾರ ನಡೆಯಿತು.

ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ, ‘ದೇಶದ ಬಡವರು ಮತ್ತು ಸೌಲಭ್ಯ ವಂಚಿತರು ಭಯ, ಹತಾಶೆಯಿಂದ ಬದುಕುವಂಥ ವಾತಾವರಣವಿದೆ. ಈ ಕುರಿತು ಎಚ್ಚರ ವಹಿಸಬೇಕು’ ಎಂದರು.

ಮೈತ್ರಿಗೆ ಬದ್ಧ: ಮೋದಿ ಸರ್ಕಾರದ ಜನಪ್ರಿಯತೆ ಕುಂದತೊಡಗಿದೆ. ಈ ಕುರಿತುಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಹತಾಶೆ ಬಿಂಬಿತವಾಗುತ್ತಿದೆ. ಮೈತ್ರಿ ರಚಿಸುವ ವಿಷಯಕ್ಕೆ ನಾವೆಲ್ಲರೂ ಬದ್ಧರಾಗಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜತೆಗಿರಲಿದ್ದೇವೆ ಎಂದೂ ಸೋನಿಯಾ ಹೇಳಿದರು.

ರಾಹುಲ್ ಗಾಂಧಿ ಮಾತನಾಡಿ, ಪಕ್ಷ ಈಗ ಅನುಭವಿಗಳ ಮತ್ತು ಉತ್ಸಾಹಿಗಳ ತಂಡವಾಗಿದ್ದು, ತುಳಿತಕ್ಕೊಳಗಾದವರ ಪರ ದನಿಯೆತ್ತಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.