ADVERTISEMENT

ಅವಹೇಳನಕಾರಿ ಪೋಸ್ಟ್‌: ಬಂಧನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:30 IST
Last Updated 17 ನವೆಂಬರ್ 2017, 20:30 IST
ಜಯಣ್ಣಗೌಡ
ಜಯಣ್ಣಗೌಡ   

ಬೇಲೂರು: ಸಿಬ್ಬಂದಿಯೊಬ್ಬರ ಪುತ್ರಿಯ ಭಾವಚಿತ್ರ ಮತ್ತು ಅವಹೇಳನಕಾರಿ ಸಂದೇಶವನ್ನು ವಾಟ್ಸ್‌ಆ್ಯಪ್‌ನಲ್ಲಿ ಹಾಕಿದ ಆರೋಪದ ಮೇಲೆ ಇಲ್ಲಿನ ವೈಡಿಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಜಯಣ್ಣಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಪ್ರಾಂಶುಪಾಲರ ವಿರುದ್ಧ ಬೇಲೂರು ಪೊಲೀಸ್‌ ಠಾಣೆಗೆ ಸಿಬ್ಬಂದಿ ದೂರು ನೀಡಿದ್ದರು. ‘ನನ್ನ ಕುಟುಂಬದ ತೇಜೋವಧೆ ಉದ್ದೇಶದಿಂದಲೇ ಇದನ್ನು ಶೇರ್‌ ಮಾಡಿದ್ದಾರೆ. ಕ್ರಮ ಜರುಗಿಸಬೇಕು’ ಎಂದು ಕೋರಿದ್ದರು.

ದೂರು ನೀಡಿದ ಸಿಬ್ಬಂದಿ ಜೊತೆಗೆ ಪ್ರಾಂಶುಪಾಲ ಜಯಣ್ಣಗೌಡ ಅವರಿಗೆ ಭಿನ್ನಾಭಿಪ್ರಾಯವಿತ್ತು. ಇದೇ ಕಾರಣದಿಂದ ಶೇರ್‌ ಮಾಡಿರಬಹುದು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.