ADVERTISEMENT

ಆಂಬುಲೆನ್ಸ್‌ಗೆ ರೈಲು ಡಿಕ್ಕಿ: ಐವರ ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:50 IST
Last Updated 16 ಮಾರ್ಚ್ 2017, 19:50 IST

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ):  ಮಾನವರಹಿತ ಲೆವೆಲ್‌ ಕ್ರಾಸಿಂಗ್‌ನಲ್ಲಿ ಆಂಬುಲೆನ್ಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಐವರು ಹೆಣ್ಣುಮಕ್ಕಳು ಮೃತಪಟ್ಟ ಘಟನೆ ಚಳ್ಳಕೆರೆ ತಾಲ್ಲೂಕಿನ ಮನ್ನೇಕೋಟೆಯ ಬಳಿ ಗುರುವಾರ ರಾತ್ರಿ 7.20ರ ಸುಮಾರಿಗೆ ಸಂಭವಿಸಿದೆ.

ಕದಿರಮ್ಮ (50), ಗಂಗಮ್ಮ (30), ಚಂದ್ರಕಲಾ (35), ಲಕ್ಷ್ಮಮ್ (60) ಶಂಕರಮ್ಮ (50) ಅಪಘಾತದಲ್ಲಿ ಮೃತಪಟ್ಟವರು.  ಮೃತರೆಲ್ಲರೂ ಬಂಡೆ ತಿಮ್ಮಲಾಪುರದ ನಿವಾಸಿಗಳು.

ಘಟನೆಯ ಹಿನ್ನೆಲೆ:  ಕೇವಲ ಏಳು ದಿನಗಳ ಹಿಂದೆ ಬಂಡೆ ತಿಮ್ಮಲಾಪುರದ ನಿವಾಸಿ ಗಂಗಮ್ಮ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಗುರುವಾರ ಮಗುವಿನ ಆರೋಗ್ಯದಲ್ಲಿ ಏರುಪೇರಾದ ನಿಮಿತ್ತ ತಳಕು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು. ನಂತರ ಬಂಡೆತಿಮ್ಮಲಾಪುರಕ್ಕೆ ಆಂಬುಲೆನ್ಸ್‌ನಲ್ಲಿ ಹಿಂತಿರುಗುವಾಗ ಮನ್ನೆಕೋಟೆಯ ಬಳಿ ಇರುವ ತಡೆರಹಿತ ಲೆವೆಲ್‌ಕ್ರಾಸಿಂಗ್ ಬಳಿ ಹಳಿಯನ್ನು ದಾಟುತ್ತಿದ್ದಾಗ ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ರೈಲು ರಭಸವಾಗಿ ಡಿಕ್ಕಿಹೊಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.