ADVERTISEMENT

ಆರೋಪ ಸಾಬೀತು ಮಾಡಿದರೆ ಕ್ಷಮೆ ಕೇಳಲು ಸಿದ್ಧ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಆರೋಪ ಸಾಬೀತು ಮಾಡಿದರೆ  ಕ್ಷಮೆ ಕೇಳಲು ಸಿದ್ಧ: ಬಿಎಸ್‌ವೈ
ಆರೋಪ ಸಾಬೀತು ಮಾಡಿದರೆ ಕ್ಷಮೆ ಕೇಳಲು ಸಿದ್ಧ: ಬಿಎಸ್‌ವೈ   
ಹುಬ್ಬಳ್ಳಿ: ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವ ವೆಂಕಟೇಶಗೌಡ ಮತ್ತು ನನಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಕಚೇರಿಯಲ್ಲಿ ದೂರು ಟೈಪಿಂಗ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
 
ಅದನ್ನು ಸಾಬೀತು ಮಾಡಿದರೆ ಅವರ ಮನೆಗೇ ಹೋಗಿ ಕ್ಷಮೆ ಕೇಳಲು ಸಿದ್ಧ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
 
‘ಕುಮಾರಸ್ವಾಮಿ ಕಡೆಯವರೇನು ಬಿಜೆಪಿ ಕಚೇರಿಯಲ್ಲಿದ್ದಾರೆಯೇ? ದೂರು ಕೊಟ್ಟವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲವೇ ತಾವು ತಪ್ಪು ಮಾಡಿಲ್ಲ ಎಂಬುದನ್ನು ಅವರು ಸಾಬೀತುಪಡಿಸಬೇಕು.
 
ಅಕ್ರಮ ಗಣಿಗಾರಿಕೆ ಬಗ್ಗೆ ಪುಸ್ತಕ ಪ್ರಕಟಿಸಿದ್ದು ನಿಜ. ಕೋರ್ಟ್‌ನಲ್ಲಿ ಅದು ಇತ್ಯರ್ಥವಾಗಲಿದೆ. ಪ್ರಚಾರಕ್ಕಾಗಿ ‘ಹಿಟ್‌ ಅಂಡ್‌ ರನ್‌’ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.