ADVERTISEMENT

ಕಾಂಗ್ರೆಸ್‌ ಮುಖಂಡ ಎನ್‌. ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:52 IST
Last Updated 16 ಮಾರ್ಚ್ 2017, 19:52 IST
ಕಾಂಗ್ರೆಸ್‌ ಮುಖಂಡ ಎನ್‌. ಮಂಜುನಾಥ್‌
ಕಾಂಗ್ರೆಸ್‌ ಮುಖಂಡ ಎನ್‌. ಮಂಜುನಾಥ್‌   

ಬೆಂಗಳೂರು:  ಕಾಂಗ್ರೆಸ್‌ ಮುಖಂಡ ಎನ್‌. ಮಂಜುನಾಥ್‌ (53)  ಅನಾರೋಗ್ಯದಿಂದಾಗಿ ನಗರದ ನಾರಾಯಣ ಹೃದಯಾಲಯದಲ್ಲಿ ಗುರುವಾರ ನಿಧನ ಹೊಂದಿದರು.

ಅವರು ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿದ್ದ ದಿವಂಗತ ಟಿ.ಎನ್‌. ನರಸಿಂಹಮೂರ್ತಿ ಅವರ ಪುತ್ರ. 

ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

ADVERTISEMENT

ಎದೆನೋವಿನಿಂದ ಬಳಲುತ್ತಿದ್ದ  ಮಂಜುನಾಥ್‌ ಅವರನ್ನು ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ಸೇರಿಸಲಾಗಿತ್ತು. ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು.

2004ರಲ್ಲಿ ಮೈಸೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು. ಸದ್ಯ ಕಾಂಗ್ರೆಸ್‌ ಎಸ್‌.ಸಿ ರಾಜ್ಯ  ಘಟಕದ ಅಧ್ಯಕ್ಷ ಹಾಗೂ ಎಐಸಿಸಿ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.