ADVERTISEMENT

ಕುಣಿಯೋಕೆ ಆಗದವರು ನೆಲ ಡೊಂಕು ಎಂದರಂತೆ:  ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 13:12 IST
Last Updated 20 ಜುಲೈ 2017, 13:12 IST
ಕುಣಿಯೋಕೆ ಆಗದವರು ನೆಲ ಡೊಂಕು ಎಂದರಂತೆ:  ಸಿದ್ದರಾಮಯ್ಯ
ಕುಣಿಯೋಕೆ ಆಗದವರು ನೆಲ ಡೊಂಕು ಎಂದರಂತೆ:  ಸಿದ್ದರಾಮಯ್ಯ   

ಧಾರವಾಡ: ಇಂದಿರಾ ಕ್ಯಾಂಟಿನ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಬಿಜೆಪಿ ಅರೋಪಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ  ‘ಇನ್ನೂ ಕ್ಯಾಂಟಿನ್‌ ಆರಂಭವೇ ಆಗಿಲ್ಲ, ಆಗಲೇ ವಿರೋಧ ಮಾಡ್ತಾ ಇದ್ದಾರೆ, ಕುಣಿಯೋಕೆ ಆಗದವರು ನೆಲ ಡೊಂಕು ಅನ್ನುವ ಹಾಗೆ ವಿರೋಧ ಪಕ್ಷದವರು ಆಡ್ತಾ ಇದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಜುಲೈ 21 ರಿಂದ 23 ರವರೆಗೆ ಅಂಬೇಡ್ಕರ  ಅವರ 126ನೇ ಜಯಂತಿ ಪ್ರಯುಕ್ತ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿದ್ದು, ದೇಶ-ವಿದೇಶದ ಭಾಷಣಕಾರರು ಬರುತ್ತಾರೆ ಎಂದರು.

ಈ ಕಾರ್ಯಕ್ರಮವನ್ನು ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಉದ್ಘಾಟಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.