ADVERTISEMENT

ಕೊಲೆ ಯತ್ನ ಆರೋಪಿಗಳು ಖುಲಾಸೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 19:55 IST
Last Updated 21 ಜುಲೈ 2017, 19:55 IST

ಗೋಕರ್ಣ  (ಉತ್ತರ ಕನ್ನಡ): ರಾಮಚಂದ್ರಾಪುರ ಮಠದ ಕಾರ್ಯಕರ್ತ ಗುರುಮೂರ್ತಿ ಭಟ್‌ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ವಿ.ಎಸ್.ಧಾರವಾಡಕರ್ ಆರೋಪಿಗಳನ್ನು ಗುರುವಾರ ಖುಲಾಸೆಗೊಳಿಸಿದ್ದಾರೆ.

‘2008ರ ಸೆ.11ರಂದು, ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವುದನ್ನು ಹಾಗೂ ಆನುವಂಶೀಯ ಅರ್ಚಕರ ಮೇಲೆ ರಾಮಚಂದ್ರಾಪುರ ಮಠದ ದಬ್ಬಾಳಿಕೆ ವಿರೋಧಿಸಿ  ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಠದ ಕಾರ್ಯಕರ್ತ ಗುರುಮೂರ್ತಿ ಅವರ ಮೇಲೆ ರಾಜಗೋಪಾಲ ಅಡಿ, ರವಿ ಅಡಿ, ಮನು ನಾವಡ ಎಂಬುವವರು ಹತ್ಯೆಗೆ ಯತ್ನಿಸಿದ್ದರು’ ಎಂದು ಶೇಖರ್ ನಾಯ್ಕ  ದೂರು ನೀಡಿದ್ದರು.

ಪ್ರಕರಣೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ದೋಷಮುಕ್ತಗೊಳಿಸಿ  ತೀರ್ಪು ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.